Webdunia - Bharat's app for daily news and videos

Install App

'ಅಕ್ಷತೆ' ವಿರುದ್ಧ ಡಿ.ಕೆ.ರವಿ ಪತ್ನಿ ಕೆಂಗಣ್ಣು

Webdunia
ಶನಿವಾರ, 2 ಮೇ 2015 (10:14 IST)
ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಬದುಕನ್ನು ಹೋಲುವ ಚಿತ್ರವನ್ನು ನಿರ್ಮಿಸಲು ಕನ್ನಡ ಚಿತ್ರರಂಗದ ಒಂದಷ್ಟು ಬುದ್ಧಿವಂತ ಮಂದಿ ಸಿದ್ಧರಾಗಿದ್ದಾರೆ. ಆ ಬಗ್ಗೆ ತಿಳಿದ ರವಿ ಪತ್ನಿ ಬೇಸರಗೊಂಡಿದ್ದು, ಚಿತ್ರದ ಬಗ್ಗೆ ಮೊದಲು ಕರ್ನಾಟಕ ಫಿಲಿಂ ಚೇಂಬರ್ ಆಫ್ ಕಾಮರ್ಸ್‌ಗೆ ದೂರು ನೀಡಿ ಚಿತ್ರದ ಶೂಟಿಂಗ್ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರು. ಚಿತ್ರವನ್ನು ರಾಜು ದೇವಸಂದ್ರ ನಿರ್ದೇಶಿಸುತ್ತಿದ್ದು, ವಿವಾದಿತ ನಟಿ ಮೈತ್ರಿಯಾ ಗೌಡ, ರಾಜ್ ಹಾಗೂ ಕಾರ್ತಿಕ್ ಎಂಬ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. 
ಈ ಚಿತ್ರದ ವಿಷಯದಲ್ಲಿ ಕುಸುಮಾ, ಒಂದು ಹೆಜ್ಜೆ ಮುಂದಿಟ್ಟಿದ್ದು, ಚಿತ್ರ ತಂಡದ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೆಎಫ್‌ಸಿಸಿಯಲ್ಲಿ ನೀಡಿದ ದೂರಿನ ಅನ್ವಯ ಆಕೆ ಯಾರೊಬ್ಬರ ವೈಯಕ್ತಿಕ ಬದುಕನ್ನು ಕುರಿತಾದ ಸಿನಿಮಾ ಮಾಡಲು ಅನುಮತಿ ನೀಡಬಾರದು ಎಂದು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ. 
 
ಇದಕ್ಕೆ ಸಂಬಂಧಪಟ್ಟಂತೆ ಮೇ 2ರಂದು ಕರ್ನಾಟಕ ಸ್ಯಾಂಡಲ್‌ವುಡ್ ವಾಣಿಜ್ಯ ಮಂಡಳಿಯಲ್ಲಿ ಮೀಟಿಂಗ್ ನಡೆಯಲಿದೆ. ಅಕ್ಷತೆ ಚಿತ್ರದ ಶೂಟಿಂಗ್‌ಗೆ ಮಾನ್ಯತೆ ನೀಡಬಾರದು ಎಂದು ಇತ್ತೀಚಿಗೆ ಕೇಂದ್ರ ಮಂತ್ರಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಸಹ ಪತ್ರ ಬರೆದು ಮನವಿ ಮಾಡಿದ್ದರು. ಈಗ ಈ ಸಂಗತಿ ಕುಸುಮಾ ಅವರ ಎಂಟ್ರಿಯಿಂದ ಮತ್ತಷ್ಟು ಬಿಗಿಯಾಗಿದೆ. ಫಲಿತಾಂಶ ಯಾರ ಕಡೆಗೆ ಎನ್ನುವುದು ಸಮಯವೇ ಹೇಳಬೇಕಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments