Select Your Language

Notifications

webdunia
webdunia
webdunia
webdunia

'ಅಕ್ಷತೆ' ವಿರುದ್ಧ ಡಿ.ಕೆ.ರವಿ ಪತ್ನಿ ಕೆಂಗಣ್ಣು

'ಅಕ್ಷತೆ' ವಿರುದ್ಧ ಡಿ.ಕೆ.ರವಿ ಪತ್ನಿ ಕೆಂಗಣ್ಣು
, ಶನಿವಾರ, 2 ಮೇ 2015 (10:14 IST)
ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಬದುಕನ್ನು ಹೋಲುವ ಚಿತ್ರವನ್ನು ನಿರ್ಮಿಸಲು ಕನ್ನಡ ಚಿತ್ರರಂಗದ ಒಂದಷ್ಟು ಬುದ್ಧಿವಂತ ಮಂದಿ ಸಿದ್ಧರಾಗಿದ್ದಾರೆ. ಆ ಬಗ್ಗೆ ತಿಳಿದ ರವಿ ಪತ್ನಿ ಬೇಸರಗೊಂಡಿದ್ದು, ಚಿತ್ರದ ಬಗ್ಗೆ ಮೊದಲು ಕರ್ನಾಟಕ ಫಿಲಿಂ ಚೇಂಬರ್ ಆಫ್ ಕಾಮರ್ಸ್‌ಗೆ ದೂರು ನೀಡಿ ಚಿತ್ರದ ಶೂಟಿಂಗ್ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರು. ಚಿತ್ರವನ್ನು ರಾಜು ದೇವಸಂದ್ರ ನಿರ್ದೇಶಿಸುತ್ತಿದ್ದು, ವಿವಾದಿತ ನಟಿ ಮೈತ್ರಿಯಾ ಗೌಡ, ರಾಜ್ ಹಾಗೂ ಕಾರ್ತಿಕ್ ಎಂಬ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. 
ಈ ಚಿತ್ರದ ವಿಷಯದಲ್ಲಿ ಕುಸುಮಾ, ಒಂದು ಹೆಜ್ಜೆ ಮುಂದಿಟ್ಟಿದ್ದು, ಚಿತ್ರ ತಂಡದ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೆಎಫ್‌ಸಿಸಿಯಲ್ಲಿ ನೀಡಿದ ದೂರಿನ ಅನ್ವಯ ಆಕೆ ಯಾರೊಬ್ಬರ ವೈಯಕ್ತಿಕ ಬದುಕನ್ನು ಕುರಿತಾದ ಸಿನಿಮಾ ಮಾಡಲು ಅನುಮತಿ ನೀಡಬಾರದು ಎಂದು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ. 
 
ಇದಕ್ಕೆ ಸಂಬಂಧಪಟ್ಟಂತೆ ಮೇ 2ರಂದು ಕರ್ನಾಟಕ ಸ್ಯಾಂಡಲ್‌ವುಡ್ ವಾಣಿಜ್ಯ ಮಂಡಳಿಯಲ್ಲಿ ಮೀಟಿಂಗ್ ನಡೆಯಲಿದೆ. ಅಕ್ಷತೆ ಚಿತ್ರದ ಶೂಟಿಂಗ್‌ಗೆ ಮಾನ್ಯತೆ ನೀಡಬಾರದು ಎಂದು ಇತ್ತೀಚಿಗೆ ಕೇಂದ್ರ ಮಂತ್ರಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಸಹ ಪತ್ರ ಬರೆದು ಮನವಿ ಮಾಡಿದ್ದರು. ಈಗ ಈ ಸಂಗತಿ ಕುಸುಮಾ ಅವರ ಎಂಟ್ರಿಯಿಂದ ಮತ್ತಷ್ಟು ಬಿಗಿಯಾಗಿದೆ. ಫಲಿತಾಂಶ ಯಾರ ಕಡೆಗೆ ಎನ್ನುವುದು ಸಮಯವೇ ಹೇಳಬೇಕಿದೆ. 

Share this Story:

Follow Webdunia kannada