Webdunia - Bharat's app for daily news and videos

Install App

’ಧನುಷ್ ಸ್ಕೂಲ್ ಸರ್ಟಿಫಿಕೇಟ್‌ನಲ್ಲಿ ಹುಟ್ಟುಮಚ್ಚೆಗಳಿಲ್ಲ’

Webdunia
ಭಾನುವಾರ, 19 ಫೆಬ್ರವರಿ 2017 (11:53 IST)
ತಮಿಳು ಸಿನಿಮಾ ನಟ ಧನುಷ್‌ಗೆ ಸಂಬಂಧಿಸಿದಂತೆ ಹುಟ್ಟುಮಚ್ಚೆಗಳ ವಿವರಗಳುಳ್ಳ ವರದಿಯನ್ನು ಸಲ್ಲಿಸಬೇಕೆಂದು ಮಧುರೈ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಧನುಷ್ ತನ್ನ ಮಗ ಎಂದು ಮಧುರೈ ಮೂಲದ ದಂಪತಿಗಳು ಪ್ರಕರಣ ದಾಖಲಿಸಿದ್ದ ಕಾರಣ ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶಿಸಿದೆ.
 
ಮಧುರೈ ಸಮೀಪ ಮೇಲೂರಿನಲ್ಲಿ ವಾಸಿಸುತ್ತಿರುವ ಕದಿರೇಷನ್, ಮೀನಾಕ್ಷಿ ದಂಪತಿಗಳು ಧನುಷ್ ತನ್ನ ಪುತ್ರನೆಂದೂ, ಈಗ ಜೀವನ ನಡೆಸುವುದು ಕಷ್ಟವಾಗಿರುವ ಕಾರಣ ತಿಂಗಳಿಗೆ ಸರಿಹೊಂದುವಷ್ಟು ಆರ್ಥಿಕ ಸಹಾಯ ಮಾಡಬೇಕೆಂದು ಆದೇಶಿಸಬೇಕೆಂದು ಕೋರಿ ಮಧುರೈ ಹೈಕೋರ್ಟ್‌ ಮೆಟ್ಟಿಲೇರಿದ್ದರು.
 
ಈ ಪ್ರಕರಣದ ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗಬೇಕೆಂದು ಧನುಷ್‍ಗೆ ಕೋರ್ಟ್ ನೋಟೀಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಧನುಷ್ ಕೌಂಟರ್ ಅಫಿಡವಿಟ್ಟನ್ನು ದಾಖಲಿಸಿದ್ದು, ಸದ್ಯಕ್ಕೆ ತಾನು ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಕಾರಣ ಕೋರ್ಟ್‌ಗೆ ಹಾಜರಾಜರಾಗಲು ಸಾಧ್ಯವಾಗುತ್ತಿಲ್ಲ. ತನ್ನ ಮೇಲಿನ ಆರೋಪ ಸುಳ್ಳಾಗಿದ್ದು, ಅದನ್ನು ರದ್ದುಪಡಿಸಬೇಕೆಂದು ಕೋರಿದ್ದರು.
 
ಧನುಷ್ ಸಲ್ಲಿಸಿದ್ದ ಕೌಂಟರ್ ಅಫಿಡವಿಟನ್ನು ನ್ಯಾಯಮೂರ್ತಿ ಜಿ ಚೊಕ್ಕಲಿಂಗಂ ಪರಿಶೀಲಿಸಿ. ಈ ಪ್ರಕರಣದಲ್ಲಿ ಧನುಷ್ ಸಲ್ಲಿಸಿದ್ದ ಶಾಲಾ ಪ್ರಮಾಣಪತ್ರಗಳಲ್ಲಿ ಹುಟ್ಟುಮಚ್ಚೆಗಳ ಬಗ್ಗೆ ವಿವರಗಳಿಲ್ಲವೆಂದು ನ್ಯಾಯಮೂರ್ತಿ ಹೇಳುತ್ತಾ, ಪ್ಲಸ್ ಟು ಓದುತ್ತಿರಬೇಕಾದರೆ ತಿರುಪತ್ತೂರು ಸ್ಕೂಲು ಧನುಷ್‌ಗೆ ನೀಡಿರುವ ಟ್ರಾನ್ಸಫರ್ ಸರ್ಟಿಫಿಕೇಟ್ ಜತೆಗೆ ಹುಟ್ಟುಮಚ್ಚೆಗಳ ವಿವರಗಳುಳ್ಳ ವರದಿಯನ್ನು ಸಲ್ಲಿಸಬೇಕೆಂದು ಆದೇಶಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಈ ಫೆ. 22ಕ್ಕೆ ಮುಂದೂಡಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments