Select Your Language

Notifications

webdunia
webdunia
webdunia
webdunia

ಡಿಸಿಪಿ ದೇವರಾಜ್ ವಿರುದ್ಧ ದೂರು: ದುನಿಯಾ ವಿಜಯ್

ಡಿಸಿಪಿ ದೇವರಾಜ್ ವಿರುದ್ಧ ದೂರು: ದುನಿಯಾ ವಿಜಯ್
ಬೆಂಗಳೂರು , ಗುರುವಾರ, 20 ನವೆಂಬರ್ 2014 (19:54 IST)
ಡಿಸಿಪಿ ದೇವರಾಜ್ ವಿರುದ್ಧ ನಾಳೆ ದೂರು ನೀಡುತ್ತೇನೆ. ನಾನು ಕಾನೂನು ಪ್ರಕಾರ ಮುಂದುವರಿಯುತ್ತೇನೆ. ದೇವರಾಜ್‌ರಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಕುಟುಂಬ ಕೂಡ ನೊಂದಿದೆ. ಡಿಸಿಪಿ ವಿರುದ್ಧ ದೂರು ನೀಡದಂತೆ ಕರೆಗಳು ಬಂದಿವೆ.

ಬೆದರಿಕೆ ಕರೆಗಳಿಗೆ ನಾನು ಹೆದರುವುದಿಲ್ಲ. ನನಗೆ ಪೊಲೀಸ್ ಆಯುಕ್ತರು ಸಹಕಾರ ನೀಡಿದ್ದಾರೆ. ಎಲ್ಲವನ್ನೂ ದೂರಿನಲ್ಲಿ ಸ್ಪಷ್ಟವಾಗಿ ತಿಳಿಸುತ್ತೇನೆ ಎಂದು ದುನಿಯಾ ವಿಜಿ ಹೇಳಿದ್ದಾರೆ. ಈ ಬಗ್ಗೆ ವಿವರಗಳನ್ನು ನೀಡುವಂತೆ ಕೇಳಿದಾಗ, ಡಿಸಿಪಿ ಚಿತ್ರವೊಂದರಲ್ಲಿ ನಟಿಸಲು ಅವಕಾಶ ನೀಡಬೇಕೆಂದು ಕೋರಿ ಭೇಟಿ ಮಾಡಿದ್ದು, ಬಳಿಕ ನನ್ನ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದರು ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಸದ್ಯಕ್ಕೆ ನಟ ತನ್ನ ಪತ್ನಿಯ ಜೊತೆಗಿನ ಎಲ್ಲಾ ಸಮಸ್ಯೆಯನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ. 

Share this Story:

Follow Webdunia kannada