ಮೆಗಾ ಸ್ಟಾರ್ ಚಿರಂಜೀವಿ ರೀ ಎಂಟ್ರಿ ಕೊಟ್ಟಿರುವ ಖೈದಿ ನಂಬರ್ 150 ಬಾಕ್ಸ್ ಆಫೀಸಲ್ಲಿ ಭಾರಿ ಯಶಸ್ಸು ಸಾಧಿಸಿದ್ದು ಚಿರಂಜೀವಿ ಖುಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರಗಳ ಮೊರೆ ಹೋಗಿದ್ದಾರೆ ಚಿರು.
ಶ್ರೀಕಾಳಹಸ್ತೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಶಾಂತಿ ಮಹಾಯಜ್ಞದಲ್ಲಿ ಕುಟುಂಬ ಸದಸ್ಯರ ಜತೆ ಪಾಲ್ಗೊಂಡಿದ್ದಾರೆ. ಶ್ರೀಕಾಳ ಹಸ್ತೀಶ್ವರನ ದರ್ಶನ ಮಾಡಿಕೊಂಡು ವಿಶೇಷ ಪೂಜೆಗಳನ್ನು ಮಾಡಿಸಿದರು. ಇಲ್ಲಿಗೆ ಚಿರು ಬಂದಿರುವುದನ್ನು ತಿಳಿದುಕೊಂಡ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದಾರೆ.
ದೇವಾಲಯದಲ್ಲಿ ಒಂದಷ್ಟು ನೂಗು ನುಗ್ಗಲು ನಡೆದಿದೆ. ಈಗ ಚಿರು ದೃಷ್ಟಿ ಸಂಪೂರ್ಣ ಸಿನಿಮಾಗಳ ಮೇಲೆಯೇ ಬಿದ್ದಿದೆ. 150ನೇ ಚಿತ್ರದ ಯಶಸ್ಸು ಅವರಲ್ಲಿ ಸಾಕಷ್ಟು ಉತ್ಸಾಹ, ಧೈರ್ಯ ತುಂಬಿದೆ. ಈ ಹಿನ್ನೆಲೆಯಲ್ಲಿ 151ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಚಿರು. ಇದೇ ಮಾರ್ಚ್ನಲ್ಲಿ ಚಿತ್ರ ಸೆಟ್ಟೇರಲಿದೆ ಎನ್ನುತ್ತಿವೆ ಮೂಲಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.