Select Your Language

Notifications

webdunia
webdunia
webdunia
webdunia

ಚೇತನ್ ಚಂದ್ರ ತಾರ ಬದುಕು ಬೆಳಗಿಸಲು ಬರುತ್ತಿರುವ ವ್ಯಾಘ್ರ-ಜಾತ್ರೆ

ಚೇತನ್ ಚಂದ್ರ  ತಾರ ಬದುಕು ಬೆಳಗಿಸಲು ಬರುತ್ತಿರುವ ವ್ಯಾಘ್ರ-ಜಾತ್ರೆ
, ಸೋಮವಾರ, 13 ಏಪ್ರಿಲ್ 2015 (10:49 IST)
ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿದ್ದ ನಟ  ಚೇತನ್ ಚಂದ್ರ. ತಮ್ಮ ದೇಹವನ್ನು ಸಾಕಷ್ಟು ಹುರಿಗೊಳಿಸಿ ಕನ್ನಡ ಚಿತ್ರರಂಗದಲ್ಲಿಯೇ ಹೊಸ ಇತಿಹಾಸ ನಿರ್ಮಿಸುವ ಕನಸು ಕಟ್ಟಿ ಬಂದರೂ ಚೇತನ ಚಂದ್ರ ಅವರನ್ನು ಕನ್ನಡಿಗರು ಹೇಳಿಕೊಳ್ಳುವಷ್ಟು ಒಪ್ಪಿಕೊಳ್ಳಲಿಲ್ಲ. ಹಾಗೆಂದು ಈ ನಟ ಸೋಲದೆ ನಿರಂತರವಾಗಿ ತಮ್ಮ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. 

ಈಗ ಅವರ ಎರಡು ಚಿತ್ರಗಳ ಮೂಲಕ ಮತ್ತೆ ಕನ್ನಡಿಗರ ಮುಂದೆ ಬಂದಿದ್ದಾರೆ. ಮೊದಲನೆಯದ್ದು ಜಾತ್ರೆ,  ಮತ್ತೊಂದು ಚಿತ್ರ ವ್ಯಾಘ್ರ. ಜಾತ್ರೆ ಚಿತ್ರವನ್ನು ರವಿತೇಜ ಅವರು ನಿರ್ದೇಶನ ಮಾಡಿದ್ದಾರೆ. ಇದನ್ನು ಶ್ರೀಕಾಂತ್ ಮೋಹನ್ ಬಾವಲೆ ಮತ್ತು ಕೆ ರಾಮಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ.   
 
ಐಶ್ವರ್ಯ ನಾಗ್ ಅವರು ಹೀರೋಯಿನ್ ಆಗಿರುವ ಈ ಚಿತ್ರದಲ್ಲಿ  ಚೇತನ್ ಚಂದ್ರ ಉತ್ತಮ ಅವಕಾಶ ಪಡೆದಿದ್ದಾರೆ. ಮಣಿಕಾಂತ್  ಕದ್ರಿ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ. ಚೇತನ್ ವರ ಮತ್ತೊಂದು ಚಿತ್ರ ವ್ಯಾಘ್ರ .ಇದರ ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆಯನ್ನು ವಿ ಪಿ ಶಂಕರ್ ಅವರು ಹೊತ್ತಿದ್ದಾರೆ. ಈ ಚಿತ್ರದ ಸಂಗೀತ ನಿರ್ದೇಶನ ಮಾಡಿರುವವರು ಜುದ ಸ್ಯಾಂಡಿ. ಈ ಚಿತ್ರದ ತಾಂತ್ರಿಕ ವರ್ಗ ಮತ್ತು ಕಲಾವಿದರ ಬಗ್ಗೆ ಇನ್ನು ಮಾಧ್ಯಮಗಳಿಗೆ ಚಿತ್ರತಂಡ ತಿಳಿಸಿಲ್ಲ.
 
ಚೇತನ್ ಚಂದ್ರ ಕಳೆದ ಕೆಲವು ವರ್ಷಗಳಿಂದ ತಮ್ಮ ತಾರ ಬದುಕಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದರು. ಈ ಎರಡು ಚಿತ್ರಗಳು ಪುನಃ ಅವರ ತಾರ ಬದುಕನ್ನು ಉಜ್ವಲ ಮಾಡುತ್ತದೆಯೇ? ಈ ಬಗ್ಗೆ ಕಾಲವೇ  ತಿಳಿಸುತ್ತದೆ. 

Share this Story:

Follow Webdunia kannada