Webdunia - Bharat's app for daily news and videos

Install App

'ರನ್ನ' ಚಿತ್ರ ನಿರ್ಮಾಪಕರ ವಿರುದ್ಧ ದೂರು

Webdunia
ಸೋಮವಾರ, 27 ಏಪ್ರಿಲ್ 2015 (10:00 IST)
ಯಾಕೋ ರನ್ನ ಚಿತ್ರಕ್ಕೆ ಸಮಸ್ಯೆಗಳು ಎದುರಾಗುತ್ತಲೇ ಇವೆ. ಅದಕ್ಕೆ ಕಾರಣಗಳು ಏನೇ ಇರ ಬಹುದು ಆದರೆ ಆ ಸಮಸ್ಯೆ ಮಾತ್ರ ತಂಡದ ಮೇಲೆ ತೀವ್ರವಾದ ಪ್ರಭಾವ ಬೀರುತ್ತಿದೆ ಎನ್ನುವುದು ಸುಳ್ಳಲ್ಲ. ರನ್ನ ಆರಂಭದಲ್ಲಿ ತನ್ನ ಶೀರ್ಷಿಕೆಯಿಂದ ತೊಂದರೆ ಎದುರಿಸಿತ್ತು. ಆದರೆ ಅದು ಹೆಚ್ಚುಕಾಲ ಮುನ್ನಡೆಯಲಿಲ್ಲ.ಈಗ ಆ ಚಿತ್ರದ ನಿರ್ಮಾಪಕರಿಗೆ ಸಮಸ್ಯೆ ಆರಂಭವಾಗಿದೆ. 
ನಿಮಿಷಾಂಬ ಚಂದ್ರಶೇಖರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರ ಮೇಲೆ ನವಶಕ್ತಿ ನಿರ್ಮಾಣ ಮಾಡಿದ್ದ ಸಿ ನಾಗರಾಜ್ ಅವರು ಕೇಸ್ ಫೈಲ್ ಮಾಡಿದ್ದಾರೆ. ಅದಕ್ಕೆ ಮುಖ್ಯಕಾರಣ ಚಂದ್ರಶೇಖರ್ ಅವರು ನಟರಾಜ್ ಬಳಿ ಹಣ ಸಾಲವಾಗಿ ಪಡೆದಿದ್ದರಂತೆ. ಅದನ್ನು ವಾಪಸು ಮಾಡುವ ತನಕ ಚಿತ್ರವನ್ನು ಬಿಡುಗಡೆ ಮಾಡಬಾರದೆನ್ನುವ ಅಂಶ (case no. 3675/15) ಮುಂದಿಟ್ಟು ಈ ಕೇಸ್ ಹಾಕಿದ್ದಾರೆ ಎನ್ನುವ  ಮಾಹಿತಿ ಹೊರ ಬಂದಿದೆ.  
 
ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ  ರನ್ನ ಸಿನಿಮಾ ಪ್ರಚಾರದಲ್ಲಿ ತಮ್ಮ ಹೆಸರನ್ನು ಬಳಸಿಕೊಳ್ಳುವುದಾಗಿ ಹೇಳಿದ್ದರೂ ಸಹಿತ ನಿಮಿಷಾಂಬ ಚಂದ್ರಶೇಖರ್ ಕೊಟ್ಟ ಮಾತಿನಂತೆ ನಡೆದಿಲ್ಲ ಎನ್ನುವುದು ಇವರ ಅಳಲು. ಈ ಕೇಸ್ ಗೆ ಸಂಬಂಧಪಟ್ಟಂತೆ ಸೆಷನ್ ಕೋರ್ಟ್ ಇಂದು ವಾದ ಪ್ರತಿವಾದ ಕೇಳಲಿದೆ ಎನ್ನುವ ಸುದ್ದಿ ಇದೆ. ಈ ಚಿತ್ರವನ್ನು ನಂದ ಕಿಶೋರ್ ಅವರು ನಿರ್ದೇಶನ ಮಾಡಿದ್ದಾರೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments