Select Your Language

Notifications

webdunia
webdunia
webdunia
webdunia

'ರನ್ನ' ಚಿತ್ರ ನಿರ್ಮಾಪಕರ ವಿರುದ್ಧ ದೂರು

'ರನ್ನ' ಚಿತ್ರ ನಿರ್ಮಾಪಕರ ವಿರುದ್ಧ ದೂರು
, ಸೋಮವಾರ, 27 ಏಪ್ರಿಲ್ 2015 (10:00 IST)
ಯಾಕೋ ರನ್ನ ಚಿತ್ರಕ್ಕೆ ಸಮಸ್ಯೆಗಳು ಎದುರಾಗುತ್ತಲೇ ಇವೆ. ಅದಕ್ಕೆ ಕಾರಣಗಳು ಏನೇ ಇರ ಬಹುದು ಆದರೆ ಆ ಸಮಸ್ಯೆ ಮಾತ್ರ ತಂಡದ ಮೇಲೆ ತೀವ್ರವಾದ ಪ್ರಭಾವ ಬೀರುತ್ತಿದೆ ಎನ್ನುವುದು ಸುಳ್ಳಲ್ಲ. ರನ್ನ ಆರಂಭದಲ್ಲಿ ತನ್ನ ಶೀರ್ಷಿಕೆಯಿಂದ ತೊಂದರೆ ಎದುರಿಸಿತ್ತು. ಆದರೆ ಅದು ಹೆಚ್ಚುಕಾಲ ಮುನ್ನಡೆಯಲಿಲ್ಲ.ಈಗ ಆ ಚಿತ್ರದ ನಿರ್ಮಾಪಕರಿಗೆ ಸಮಸ್ಯೆ ಆರಂಭವಾಗಿದೆ. 
ನಿಮಿಷಾಂಬ ಚಂದ್ರಶೇಖರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರ ಮೇಲೆ ನವಶಕ್ತಿ ನಿರ್ಮಾಣ ಮಾಡಿದ್ದ ಸಿ ನಾಗರಾಜ್ ಅವರು ಕೇಸ್ ಫೈಲ್ ಮಾಡಿದ್ದಾರೆ. ಅದಕ್ಕೆ ಮುಖ್ಯಕಾರಣ ಚಂದ್ರಶೇಖರ್ ಅವರು ನಟರಾಜ್ ಬಳಿ ಹಣ ಸಾಲವಾಗಿ ಪಡೆದಿದ್ದರಂತೆ. ಅದನ್ನು ವಾಪಸು ಮಾಡುವ ತನಕ ಚಿತ್ರವನ್ನು ಬಿಡುಗಡೆ ಮಾಡಬಾರದೆನ್ನುವ ಅಂಶ (case no. 3675/15) ಮುಂದಿಟ್ಟು ಈ ಕೇಸ್ ಹಾಕಿದ್ದಾರೆ ಎನ್ನುವ  ಮಾಹಿತಿ ಹೊರ ಬಂದಿದೆ.  
 
ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ  ರನ್ನ ಸಿನಿಮಾ ಪ್ರಚಾರದಲ್ಲಿ ತಮ್ಮ ಹೆಸರನ್ನು ಬಳಸಿಕೊಳ್ಳುವುದಾಗಿ ಹೇಳಿದ್ದರೂ ಸಹಿತ ನಿಮಿಷಾಂಬ ಚಂದ್ರಶೇಖರ್ ಕೊಟ್ಟ ಮಾತಿನಂತೆ ನಡೆದಿಲ್ಲ ಎನ್ನುವುದು ಇವರ ಅಳಲು. ಈ ಕೇಸ್ ಗೆ ಸಂಬಂಧಪಟ್ಟಂತೆ ಸೆಷನ್ ಕೋರ್ಟ್ ಇಂದು ವಾದ ಪ್ರತಿವಾದ ಕೇಳಲಿದೆ ಎನ್ನುವ ಸುದ್ದಿ ಇದೆ. ಈ ಚಿತ್ರವನ್ನು ನಂದ ಕಿಶೋರ್ ಅವರು ನಿರ್ದೇಶನ ಮಾಡಿದ್ದಾರೆ.  

Share this Story:

Follow Webdunia kannada