ಡೈರೆಕ್ಟರ್ಸ್ ಸ್ಪೆಷಲ್' ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಟ ಧನಂಜಯ್ ಈಗ 'ಬಾಕ್ಸರ್' ಆಗಿದ್ದಾರೆ. ಈಗಾಗಲೇ ಧನಂಜಯ್ ಅಭಿನಯಕ್ಕೆ ಅಭಿಮಾನಿಗಳು ಭೇಷ್ ಅಂದಿರುವಾಗಲೇ ಧನಂಜಯ್ ಬಾಕ್ಸರ್ ಲುಕ್ ನಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದಾರೆ.
ಬಾಕ್ಸರ್ ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ಮುಂದಿನ ವಾರ ಈ ಸಿನಿಮಾದ ಆಡಿಯೋ ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾದ ತುಂಟ ತಾಟಕೀಯಾ ಒಂಟಿ ಶೂರ್ಪನಖಿ ಎಂಬ ಸ್ಪೆಷಲ್ ಸಾಂಗ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಸಖತ್ ಮಜಾ ನೀಡುತ್ತಿದೆ. ಯೋಗರಾಜ್ ಭಟ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇನ್ನು ಬ್ಯಾಂಕಾಕ್ ನ ಹಳ್ಳಿಯೊಂದರಲ್ಲಿ ಈ ಸಾಂಗ್ ಶೂಟ್ ಮಾಡಲಾಗಿದ್ದು, ಇದುವರೆಗೂ ಯಾರೂ ಇಲ್ಲಿ ಸಿನಿಮಾ ಶೂಟ್ ಮಾಡೇ ಇಲ್ಲವಂತೆ.
ಜಯಮ್ಮ ಕಂಬೈನ್ಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಧನಂಜಯ್ಗೆ ನಾಯಕಿಯಾಗಿ ಕೃತಿಕಾ ಜಯಕುಮಾರ್ ಕಾಣಿಸಿಕೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಈ ಸಿನಿಮಾ ಮುಂದಿನ ತಿಂಗಲು ಪ್ರೇಕ್ಷಕರೆದುರಿಗೆ ಬರಲಿದೆ.