Webdunia - Bharat's app for daily news and videos

Install App

ರಜಿನಿಕಾಂತ್ ಒಳ್ಳೆಯ ನಟನೆಂದು ಒಪ್ಪಿಕೊಳ್ಳದ ನಿರ್ದೇಶಕ

Webdunia
ಶನಿವಾರ, 15 ಏಪ್ರಿಲ್ 2017 (20:11 IST)
ಸೂಪರ್ ಸ್ಟಾರ್ ರಜಿನಿಕಾಂತ್ ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟರ ಪೈಕಿ ಒಬ್ಬರು. ಅವರ ಸ್ಟೈಲ್, ಡೈಲಾಗ್ ಡೆಲಿವರಿಗೆ ಹುಚ್ಚೆದ್ದು ಕುಣಿಯುವ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಆದರೆ, ಹಿರಿಯ ನಿರ್ದೇಶಕ ಭಾರತೀರಾಜ್ ಮಾತ್ರ ರಜಿನಿಕಾಂತ್ ಅವರನ್ನ ಇಂದಿಗೂ ಒಳ್ಳೆಯ ನಟನೆಂದು ಒಪ್ಪಿಕೊಂಡಿಲ್ಲವಂತೆ. ಈ ಮಾತನ್ನ ಸ್ವತಃ ರಜಿನಿಕಾಂತ್ ಹೇಳಿದ್ದಾರೆ.
ಭಾರತಿರಾಜ್ ನಿರ್ದೇಶನದ `16 ವಯಧಿನಿಲ್ಲೆ’ ಚಿತ್ರದ ಮೂಲಕವೇ ರಜಿನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರೂ ರಜಿನಿ ನಟನೆಯನ್ನ ಭಾರತೀರಾಜ್ ಒಪ್ಪಿಕೊಂಡಿಲ್ಲವಂತೆ.

`ನಾನು ಭಾರತೀರಾಜ್ ಅವರನ್ನ ತುಂಬಾ ಇಷ್ಟಪಡುತ್ತೇನೆ. ಅವರೂ ನನ್ನನ್ನ ಇಷ್ಟಪಡುತ್ತಾರೆ.  ಹಳೆಯ ಸಂದರ್ಶನವೊಂದರಲ್ಲಿ ಪತ್ರಕರ್ತರೊಬ್ಬರು ನನ್ನ ನಟನೆ ಬಗ್ಗೆ ಕೇಳಿದಾಗ’ ‘He is a good human being’.” ಎಂದಷ್ಟೇ ಭಾರತೀರಾಜ್ ಹೇಳಿದರು. ಅವರ ಮನಸ್ಸಿನ ಮನಸ್ಸಿನ ಮಾತನ್ನ ಓದಬಲ್ಲೆ ಎಂದು ಚೆನ್ನೈನ ಭಾರತೀರಾಜ್ ಅವರ ಇಂಟರ್ ನ್ಯಾಶನಲ್ ಫಿಲ್ಮ್ ಇನ್ಸ್`ಟಿಟ್ಯೂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರಜಿನಿ ಹೇಳಿದ್ದಾರೆ.. 

ಎರಡು ಬಾರಿ ಮಾತ್ರ ಭಾರತೀರಾಜ ನನ್ನ ಸಮಯ ಕೇಳಿದ್ದಾರೆ. `16 ವಯಧಿನಿಲ್ಲೆ’ ಚಿತ್ರಕ್ಕಾಗಿ ಒಮ್ಮೆ ಮತ್ತು ಈಗ ಫಿಲ್ಮ್ ಇನ್ಸ್`ಟಿಟ್ಯೂಟ್ ಉದ್ಘಾಟನೆಗೆ ಕೇಳಿದ್ದಾರೆ. ನಾನೂ ಕೂಡ ಇಲ್ಲಿ ಒಬ್ಬ ವಿದ್ಯಾರ್ಥಿ ಎಂದು ರಜಿನಿ ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments