ಎಲ್ಲ ಸರಿಯಾಗಿದೆ ರಂಜಾನ್ ಹಬ್ಬದ ಸಮಯದಲ್ಲಿ ತಮ್ಮ ಹೊಸ ಚಿತ್ರ ಭಜರಂಗಿ ಭಾಯ್ಜಾನ್ ಬಿಡುಗಡೆ ಮಾಡ ಬೇಕು ಎಂದು ಚಿತ್ರತಂಡ ಸಿದ್ಧವಾಗಿರುವ ಈ ಸಮಯದಲ್ಲಿ ತೊಂದರೆ ಎದುರಾಗಿದೆ ಟೈಟಲ್ ಗೆ ಸಂಬಂಧಪಟ್ಟಂತೆ. ವಿಶ್ವ ಹಿಂದೂ ಪರಿಷತ್ ನವರು ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ಭಜರಂಗಿ ಭಾಯ್ಜಾನ್ ಚಿತ್ರದ ಶೀರ್ಷಿಕೆ ಬದಲಾವಣೆ ಮಾಡಿ ಎಂದು ಧರಣಿ ನಡೆಸುತ್ತಿದ್ದಾರೆ. ಈ ಹೆಸರಿನಿಂದ ಹಿಂದೂಗಳ ಭಾವನೆಗಳಿಗೆ ನೋವು ಉಂಟಾಗಿದೆ ಎನ್ನುವ ಅಂಶ ಮುಂದಿಟ್ಟುಕೊಂಡು ಅವರು ಈ ಶೀರ್ಷಿಕೆ ಬದಲಾವಣೆ ಮಾಡ ಬೇಕು ಎನ್ನುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಬದಲಾವಣೆ ಮಾಡದೆ ಹೋದರೆ ತಾವು ತೀವ್ರವಾಗಿ ಗಲಾಟೆ ಮಾಡುವುದಾಗಿ ಈ ಸಮಯದಲ್ಲಿ ಹೇಳಿದ್ದಾರೆ.
ಈ ಸಂಗತಿಗೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ನಿವಾಸಿ ಚಿತ್ರಕೂಟ್ ಅವರು ಲೀಗಲ್ ನೋಟೀಸನ್ನು ಸಲ್ಮಾನ್ ಖಾನ್,ಯಶ್ರಾಜ್ ಫಿಲಿಮ್ಸ್ ಮತ್ತು ನಿರ್ದೇಶಕ ಕಬೀರ್ ಖಾನ್ ಗೆ ಕಳುಹಿಸಿದ್ದಾರೆ.ಭಾಯ್ಜಾನ್ ಶೀರ್ಷಿಕೆ ತೆಗೆಯಿರಿ ಹಾಗೂ ಇದರಲ್ಲಿ ಇರುವ ಕೆಲವೊಂದು ಸನ್ನಿವೇಶಗಳಿಗೆ ಕತ್ತರಿ ಹಾಕಿ ಎನ್ನುವುದು ಇವರ ಬೇಡಿಕೆಯಾಗಿದೆ.
ಈದ್ ನಲ್ಲಿ ಬಿಡುಗಡೆ ಆಗಲು ಸಿದ್ಧವಾಗಿರುವ ಈ ಚಿತ್ರದಲ್ಲಿ ಭಜರಂಗ ಬಲಿ ಭಕ್ತ ಪುಟ್ಟ ಹುಡುಗಿ ಒಬ್ಬಳನ್ನು ಅವಳ ತಾಯ್ನಾಡಾದ ಪಾಕಿಸ್ತಾನಕ್ಕೆ ಸೇರಿಸುವ ಉದ್ದೇಶ ಹೊಂದಿರುತ್ತಾನೆ.ಅತ್ಯಂತ ಕುತೂಹಲಕಾರಿಯಾದ ಸಂಗತಿಗಳನ್ನು ಹೊಂದಿರುವ ಈ ಚಿತ್ರ ಜುಲೈ 15 ಕ್ಕೆ ಬಿಡುಗಡೆ ಆಗಲಿದೆ.ಸಲ್ಮಾನ್ ಮತ್ತು ಕಬೀರ್ ಜೋಡಿಯ ಏಕ್ತಾ ಟೈಗರ್ ಬಳಿಕ ಈಗ ಚಿತ್ರ ಜನರ ಮುಂದೆ ಬರಲಿದೆ. ಏಕ್ತಾ ಟೈಗರ್ 2012 ರಲ್ಲಿ ಬಿಡುಗಡೆ ಆಗಿತ್ತು.