Webdunia - Bharat's app for daily news and videos

Install App

ಬೆಂಗಳೂರು ಕಂಬಳ ವೀಕ್ಷಿಸಲು ಬರುವವರಿಗೆ ಕರಾವಳಿಯ ಭರ್ಜರಿ ಭೋಜನ ಉಚಿತ

Webdunia
ಶನಿವಾರ, 25 ನವೆಂಬರ್ 2023 (17:18 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಬೆಂಗಳೂರು ಕಂಬಳದಲ್ಲಿ ಕರಾವಳಿಯ ವೆಜ್, ನಾನ್ ವೆಜ್ ಭರ್ಜರಿ ಭೋಜನ ಸವಿಯುವ ಯೋಗ ಜನರದ್ದು.

ಇಂದು ಮತ್ತು ನಾಳೆ ಬರುವ ಜನರಿಗಾಗಿ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿದೆ. ವೆಜ್ ಮತ್ತು ನಾನ್ ವೆಜ್ ಎರಡೂ ಬಗೆಯ ಅಡುಗೆಗಳನ್ನು ಮಾಡಲಾಗಿದೆ. ಈ ಪೈಕಿ ನಾನ್ ವೆಜ್ ಪ್ರಿಯರಿಗಾಗಿ ಕರಾವಳಿ ಮೀನು, ಚಿಕನ್ ಸ್ಪೆಷಲ್ ಅಡುಗೆಗಳನ್ನು ತಯಾರಿಸಲಾಗುತ್ತಿದೆ.

ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಾಹಾರ, ರಾತ್ರಿಗೆ ಮತ್ತೆ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 3-4 ಲಕ್ಷ ಜನರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ. ಕರಾವಳಿ ಸ್ಪೆಷಲ್ ಅಡುಗೆ ಮಾಡಲು ಮಂಗಳೂರು ಮೂಲದ ಬಾಣಸಿಗರನ್ನೇ ಕರೆಸಿಕೊಳ್ಳಲಾಗಿದೆ.

ಉಚಿತ ಊಟದ ವ್ಯವಸ್ಥೆ ಇದ್ದಿದ್ದರಿಂದ ಇಂದು ಜನರ ನೂಕು ನುಗ್ಗಲು ಉಂಟಾಗಿತ್ತು. ನಾಳೆ ಭಾನುವಾರವಾದ್ದರಿಂದ ಮತ್ತಷ್ಟು ಜನ ಸೇರುವ ನಿರೀಕ್ಷೆಯಿದೆ. ಹೀಗಾಗಿ ನಾಳೆಯೂ ಊಟದ ಹಾಲ್ ನಲ್ಲಿ ಗೊಂದಲವುಂಟಾದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಥಗ್ ಲೈಫ್ ಮೂವಿಗೆ ನಿಷೇಧ: ಬೆಂಗಳೂರಿನ ಕಮಲ್ ಹಾಸನ್ ಪ್ರೇಮಿ ಮಾಡಿದ್ದೇನು ಗೊತ್ತಾ

Kamal Hassan ಕನ್ನಡ ವಿವಾದ: ತಮಿಳುನಾಡು ಜನತೆಗೆ ಸ್ಪೆಷಲ್ ಥ್ಯಾಂಕ್ಸ್ ಎಂದ ನಟ

Video Viral: RCB ವಿನ್‌ ಆಗುತ್ತಿದ್ದ ಹಾಗೇ ಮಗನ ವರ್ತನೆಯನ್ನು ವಿಡಿಯೋ ಮಾಡಿ ಹಂಚಿಕೊಂಡ ನಟ ಅಲ್ಲು ಅರ್ಜುನ್‌

Kamal Haasan: ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿದ್ದು ಯಾಕೆ: ರಂಜನಿ ರಾಘವನ್ ಸ್ಪಷ್ಟನೆ

Vaishnavi Gowda: ಮದುವೆ ಸಂಗೀತ್ ಕಾರ್ಯಕ್ರಮವನ್ನೂ ಮರೆತು ಆರ್ ಸಿಬಿ ಮ್ಯಾಚ್ ನೋಡಿದ ವೈಷ್ಣವಿ ಗೌಡ

ಮುಂದಿನ ಸುದ್ದಿ
Show comments