Webdunia - Bharat's app for daily news and videos

Install App

ರಸ್ತೆಗಳಿಗೆ ಕಲಾವಿದರ ಹೆಸರನ್ನಿಡಲು ಬಿಬಿಎಂಪಿ ಸಜ್ಜು...?!

Webdunia
ಶನಿವಾರ, 28 ಮಾರ್ಚ್ 2015 (10:29 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬಿಬಿಎಂಪಿ  ಬೆಂಗಳೂರಿನ ಕೆಲವು ರಸ್ತೆಗಳಿಗೆ ಚಂದನವನದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕಲಾವಿದರ ಹೆಸರನ್ನು ನೀಡಲು ನಿರ್ಧಾರ ಮಾಡಿದೆ. ವಾರ್ಡ್ ನಂಬರ್ 66, ಸುಬ್ರಮಣ್ಯನಗರ ಸಂಗೊಳ್ಳಿ ರಾಯಣ್ಣ ಪಾರ್ಕ್ ಎದುರಲ್ಲಿ ಇರುವ ರಸ್ತೆಗೆ ದಿವಂಗತ ಹಾಸ್ಯನಟ ಎನ್.ಎಸ್.ರಾವ್ ಅವರ ಹೆಸರು ನೀಡಲು ನಿರ್ಧಾರ ಮಾಡಿದೆ. 
ವಾರ್ಡ್ 108, ಶ್ರೀ ರಾಮ ಮಂದಿರ ವಾರ್ಡ್ ಅಂದರೆ ರಾಜಾಜಿ ನಗರ ಆರನೇ ಬ್ಲಾಕ್ ನಿಂದ ರಾಜಾಜಿ ನಗರ ಪೊಲೀಸ್ ಠಾಣೆ ತನಕ ಇರುವ ರಸ್ತೆಗೆ ಪ್ರಸಿದ್ಧ ನಿರ್ದೇಶಕ ದಿವಂಗತ ಸಿದ್ಧಲಿಂಗಯ್ಯ ಅವರ ಹೆಸರು ನೀಡಲು ನಿರ್ಧರಿಸಲಾಗಿದೆಯಂತೆ.  
 
ಈ ರಸ್ತಯೇ ಪಕ್ಕದಲ್ಲಿ ಡಾ. ರಾಜ್ ಕುಮಾರ್ ರಸ್ತೆ ಇದೆ. ಇತ್ತೀಚಿಗೆ ಅನಾರೋಗ್ಯದ ಕಾರಣದಿಂದ ಸಿದ್ಧಲಿಂಗಯ್ಯ ಅವರು ಮರಣವನ್ನು ಅಪ್ಪಿದ್ದು ಎಲ್ಲರಿಗೂ ಗೊತ್ತೇ ಇದೆ. ನಾಯಂಡಹಳ್ಳಿ ಸರ್ಕಲ್‌‌‌‌‌ನಿಂದ ತುಮಕೂರ್ ರಸ್ತೆ ಅಂದರೆ ಪೀಣ್ಯ ರಸ್ತೆಗೆ ಡಾ. ರಾಜ್ ಕುಮಾರ್ ಪುಣ್ಯ ಭೂಮಿ ರಸ್ತೆ ಎಂದು ಹೆಸರಿಸಲಾಗುತ್ತಿದೆ. ಈ ಮೂರು ರಸ್ತೆಗಳ ಹೆಸರನ್ನು ಒಂದೇ ದಿನ ನಾಮಕರಣ ಮಾಡಲಾಗುತ್ತದೆ ಎಂದು ಬಿಬಿಎಂಪಿ ಕಡೆಯಿಂದ ಮಾಹಿತಿ ಹೊರ ಬಂದಿದೆ. ಇನ್ನು ಮುಂದೆ ತಮ್ಮ ಮೆಚ್ಚಿನ ಪ್ರತಿಭೆಗಳನ್ನು ಈ ಮೂಲಕ ನೆನಪಿಸಿ ಕೊಳ್ಳ ಬಹುದಾಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments