Select Your Language

Notifications

webdunia
webdunia
webdunia
webdunia

ಕನ್ನಡಕ್ಕೆ ಮತ್ತೆ ಬಂದಿದ್ದಾರೆ ಬಾಹುಬಲಿ ವಿಲನ್

ಕನ್ನಡಕ್ಕೆ ಮತ್ತೆ ಬಂದಿದ್ದಾರೆ ಬಾಹುಬಲಿ ವಿಲನ್
, ಶುಕ್ರವಾರ, 3 ಜುಲೈ 2015 (10:09 IST)
ಪ್ರಭಾಕರ್, ಟಾಲಿವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ವಿಲನ್. ಆರಡಿ ನಾಲ್ಕಿ ಇಂಚು ಎತ್ತರವಿರುವ ಪ್ರಭಾಕರ್ ಅವರದ್ದು ವಿಲನ್ ರೋಲ್ ಗೆ  ಪಕ್ಕಾ ಸೂಟ್ ಆಗುವ ಪರ್ಸನಾಲಿಟಿ.  ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಅನ್ವೇಷಣೆಯೇ ಈ ಪ್ರಭಾಕರ್. ತಮ್ಮ ಮರ್ಯಾದಾ ರಾಮಣ್ಣ ಸಿನಿಮಾದಲ್ಲಿ ಮೊದಲ ಬಾರಿಗೆ ರಾಜಮೌಳಿ ಪ್ರಭಾಕರ್ ಅವರನ್ನು ಪರಿಚಯಿಸಿದ್ದರು. ಬಲಿಕ ತಮ್ಮ ಬಾಹುಬಲಿ ಸಿನಿಮಾದಲ್ಲೂ ಪ್ರಭಾಕರ್ ಅವರಿಗೆ ಖಡಕ್ ವಿಲನ್ ರೋಲ್ ಒಂದನ್ನು ರಾಜಮೌಳಿ ನೀಡಿದ್ದಾರೆ.
ಬಾಹುಬಲಿ ಸಿನಿಮಾದಲ್ಲಿ ಸೇನಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ  ಕನ್ನಡದಲ್ಲಿ ತಮ್ಮ ಕಮಾಲ್ ತೋರಿಸುವುದಕ್ಕಾಗಿ ಪ್ರಭಾಕರ್  ಚಂದನವನಕ್ಕೆ ಕಾಲಿಟ್ಟಿದ್ದಾರೆ. ಅಂದ್ಹಾಗೆ ಪ್ರಭಾಕರ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆಯ ಆರ್. ಚಂದ್ರು ನಿರ್ದೇಶನದ ಗಜಕೇಸರಿ ಸಿನಿಮಾದಲ್ಲಿಯೂ ಪ್ರಭಾಕರ್ ವಿಲನ್ ರೋಲ್ ಮಾಡಿ ಮಿಂಚಿದ್ರು. ಇದೀಗ ಮತ್ತೆ ಪ್ರಭಾಕರ್ ಆರ್. ಚಂದ್ರು ನಿರ್ದೇಶನದ ಮತ್ತೊಂದು ಚಿತ್ರ ಲಕ್ಷ್ಮಣ್ ನಲ್ಲಿ ಅಭಿನಯಿಸೋದಕ್ಕಾಗಿ ಪ್ರಭಾಕರ್ ಮತ್ತೆ ಬಂದಿದ್ದಾರೆ.
 
ನಿನ್ನೆಯಷ್ಟೇ ಸಿನಿಮಾದ ಸಾಹಸ ದೃಶ್ಯಗಳನ್ನು ಬೆಂಗಳೂರಿನ ನೈಸ್ ರೋಡ್ ನಲ್ಲಿ ಚಿತ್ರೀಕರಿಸಲಾಯ್ತು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಪ್ರಭಾಕರ್ ಹಾಗೂ ನಾಯಕ ಅನೂಪ್ ಸಾಹಸ ದೃಶ್ಯಗಳನ್ನು ತಿಳಿಸಿಕೊಟ್ರು. ಇನ್ನು ಚಿತ್ರದಲ್ಲಿ  ಪ್ರಭಾಕರ್ ವಿಲನ್ ಪಾತ್ರವಾದ್ರೂ ಪಾತ್ರಕ್ಕೆ ಎಮೋಷನಲ್ ಟಚ್ ನೀಡಲಾಗಿದೆಯಂತೆ.  ಸಿನಿಮಾದಲ್ಲಿ ಹೆಚ್.ಆರ್. ರೇವಣ್ಣ ಪುತ್ರ ಅನೂಪ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ ಪ್ರಭಾಕರ್ ಮತ್ತೆ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ನೋಡುತ್ತಿದ್ದರೆ ತೆಲುಗಿನಂತೆ ಕನ್ನಡದಲ್ಲೂ ಪ್ರಭಾಕರ್ ಫುಲ್ ಮಿಂಚುತ್ತಾರೆ ಎಂಬ ಸೂಚನೆ ಸಿಗುತ್ತಿದೆ.

Share this Story:

Follow Webdunia kannada