Webdunia - Bharat's app for daily news and videos

Install App

ರಕ್ಷಿತ್ ಶೆಟ್ಟಿಗೆ ಬಂಧನ ವಾರಂಟ್: ‘ಕಿರಿಕ್’ ವಿವಾದದ ಬಗ್ಗೆ ರಕ್ಷಿತ್ ಶೆಟ್ಟಿ ಸುದೀರ್ಘ ಸ್ಪಷ್ಟನೆ

Webdunia
ಬುಧವಾರ, 26 ಫೆಬ್ರವರಿ 2020 (09:57 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ 9 ನೇ ಎಸಿಎಂಎಂ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದ್ದು, ಈ ವಿವಾದದ ಬಗ್ಗೆ ರಕ್ಷಿತ್ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.


ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಹಾಡೊಂದನ್ನು ಬಳಸಲಾಗಿದೆ ಎಂದು ಲಹರಿ ಸಂಸ್ಥೆ ನೀಡಿದ್ದ ದೂರಿನನ್ವಯ ಕೃತಿ ಚೌರ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮತ್ತು ಅವರ ಪರಂವಾ ಸ್ಟುಡಿಯೋ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ.

ಆದರೆ ಈ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ರಕ್ಷಿತ್ ಈ ಪ್ರಕರಣ ಕಿರಿಕ್ ಪಾರ್ಟಿ ಬಿಡುಗಡೆ ಸಂದರ್ಭದಲ್ಲೇ ಕೇಸು ದಾಖಲಾಗಿ ಅದನ್ನು ನಾವು ಸಿವಿಲ್ ಮತ್ತು ಹೈ ಕೋರ್ಟ್ ಮೂಲಕ ಜಯವನ್ನೂ ಪಡೆದಿದ್ದೆವು. ಅದರ ಸಂಬಂಧ ಮತ್ತೆ ಈಗ ದೂರು ನೀಡುವ ಅಗತ್ಯವೇನಿತ್ತು. ವಿಶೇಷವೆಂದರೆ ಈ ದೂರನ್ನು ಆರು ತಿಂಗಳ ಹಿಂದೆ ದಾಖಲಿಸಲಾಗಿದೆ. ಆದರೆ ನಮಗೆ ಅಥವಾ ನಮ್ಮ ಲಾಯರ್ ಗೆ ಈ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಯಾಕೆ?

ಅಂದು ಕಿರಿಕ್ ಪಾರ್ಟಿ ರಿಲೀಸ್ ಆಗುವ ಹಿಂದಿನ ದಿನ ಈ ಪ್ರಕರಣ ದಾಖಲಾಗಿತ್ತು. ಆಗ ನಾವು ನಮ್ಮ ಹಾಡನ್ನು ಮರಳಿ ಪಡೆಯಲು ಕೋರ್ಟ್ ನಲ್ಲಿ ಹೋರಾಡಬೇಕಾಗಿತ್ತು. ಅದೃಷ್ಟವಶಾತ್ ಕೋರ್ಟ್ ನಲ್ಲಿ ಜಯಗಳಿಸಿ ಎರಡನೇ ವಾರದಿಂದ ಈ ಹಾಡನ್ನು ಸಿನಿಮಾದಲ್ಲಿ ಸೇರ್ಪಡೆ ಮಾಡಿದ್ದೆವು. ಒಂದು ವರ್ಷದ ಬಳಿಕ ನಾವು ಕೋರ್ಟ್ ಕೇಸ್ ನಲ್ಲಿ ಜಯಗಳಿಸಿದ್ದೆವು. ಇದೆಲ್ಲವೂ ನಮಗೆ ಹೊಸ ಅನುಭವವಾಗಿತ್ತು. ಇದೆಲ್ಲಾ ಯಾಕಾಗಿ ಎಂದು ಗೊತ್ತಾಗುತ್ತಿಲ್ಲ ಎಂದು ರಕ್ಷಿತ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೊಂದು ಸಿನಿಮಾ ಘೋಷಿಸಿದ ರಿಷಭ್ ಶೆಟ್ಟಿ: ನೆಟ್ಟಿಗರಿಂದ ಆಕ್ಷೇಪ

ಯುವ ಪತ್ನಿ ವಿಚಾರವೆತ್ತಿದ್ದಕ್ಕೆ ರೊಚ್ಚಿಗೆದ್ದ ದೊಡ್ಮನೆ ಫ್ಯಾನ್ಸ್

ರಮ್ಯಾ, ಪ್ರಥಮ್ ಡಿಬಾಸ್ ಫ್ಯಾನ್ಸ್ ವಾರ್ ಆಗ್ತಿದ್ದರೆ ದರ್ಶನ್ ಎಲ್ಲಿದ್ದಾರೆ ಗೊತ್ತಾ

ಸುಮ್ಮನೇ ಬಿಡುವ ಮಾತೇ ಇಲ್ಲ: ದರ್ಶನ್ 43 ಅಭಿಮಾನಿಗಳಿಗಾಗಿ ಹುಡುಕಾಟ

ರಮ್ಯಾಗೆ ಫ್ಯಾನ್ಸ್ ಅಶ್ಲೀಲ ಮೆಸೇಜ್ ನಿಂದ ಸಂಕಷ್ಟಕ್ಕೆ ಸಿಲುಕುತ್ತಾರಾ ದರ್ಶನ್

ಮುಂದಿನ ಸುದ್ದಿ
Show comments