Webdunia - Bharat's app for daily news and videos

Install App

ಬಾಹುಬಲಿ ದೇವಸೇನೆಗೆ ಇನ್ನೂ ಕಂಕಣಭಾಗ್ಯ ಇಲ್ಲ

Webdunia
ಬುಧವಾರ, 28 ಡಿಸೆಂಬರ್ 2016 (11:15 IST)
ನನಗೆ ಮದುವೆ ಆಗೇ ಹೋಯ್ತು ಅಂತ ಕೆಲವೊಮ್ಮೆ, ರಹಸ್ಯವಾಗಿ ಉದ್ಯಮಿಯೊಬ್ಬರ ಜೊತೆ ನಿಶ್ಚಿತಾರ್ಥ ಆಯ್ತು ಅನ್ನೋ ಸುದ್ದಿಗಳು ನನ್ನ ಕಿವಿಗೆ ಬಿದ್ದಿವೆ. ಆ ತರದ ಸುದ್ದಿಗಳನ್ನು ಕೇಳಿದಾಗ ನಗು ಬಂದಿದೆ. ಸದ್ಯಕ್ಕೆ ನನಗೆ ಮದುವೆ ವಯಸ್ಸು ಬಂದಿದೆ. ಆದರೆ ನನಗೆ ತಕ್ಕ ವರ ಇನ್ನೂ ಸಿಕ್ಕಿಲ್ಲ ಎಂದಿದ್ದಾರೆ ಮಂಗಳೂರು ಮಲ್ಲಿಗೆ ಅನುಷ್ಕಾ ಶೆಟ್ಟಿ.
 
ತೆಲುಗಿನಲ್ಲಿ ಅರುಂಧತಿ, ರುದ್ರಮದೇವಿಯಂತಹ ಭಿನ್ನ ಪಾತ್ರಗಳನ್ನು ಪೋಷಿಸಿ ಹೆಸರು ಮಾಡಿರುವ ಅನುಷ್ಕಾಗೆ ಮತ್ತಷ್ಟು ಹೆಸರು ತಂದುಕೊಟ್ಟಿದ್ದು ಬಾಹುಬಲಿ ಚಿತ್ರದ ದೇವಸೇನ ಪಾತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮದುವೆ ಬಗ್ಗೆಯೇ ಸುದ್ದಿಗಳು ಹೆಚ್ಚಾಗಿವೆ.
 
ಈ ಹಿನ್ನೆಲೆಯಲ್ಲಿ ಅನುಷ್ಕಾ ಮಾತನಾಡುತ್ತಾ, ಮದುವೆ ಅನ್ನೋದು ನಾವು ಅಂದುಕೊಂಡಾಗ ನಡೆಯಲ್ಲ. ಆ ಗಳಿಕೆ ಕೂಡಿಬರಬೇಕು. ಆಗಲೇ ಮದುವೆ ಅನ್ನೋದು ನಡೆಯುತ್ತೆ. ನನಗಿಗ್ಗೂ ಕಂಕಣಭಾಗ್ಯ ಕೂಡಿಬಂದಿಲ್ಲವೇನೋ. ಸದ್ಯಕ್ಕೆ ನನ್ನ ಗಮನ ಸಿನಿಮಾಗಳ ಕಡೆಗಿದೆ. ಹೀರೋಯಿನ್ ಓರಿಯಂಟೆಡ್ ಸಿನಿಮಾಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಅನುಷ್ಕಾ. 
 
ಸೈಜ್ ಜೀರೋ ಚಿತ್ರದ ಭಿನ್ನವಾದಂತ ಪಾತ್ರ ಬಗ್ಗೆ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತದೆ. ಓಂ ನಮೋ ವೆಂಕಟೇಶಾಯ ಚಿತ್ರದಲ್ಲಿ ಹೊಸದಾಗಿ ಕಾಣಿಸಲಿದ್ದೇನೆ. ಬಾಹುಬಲಿ 2, ಭಾಗಮತಿ, ಸಿಂಗಂ 3 ಸಿನಿಮಾಗಳ ಮೂಲಕವೂ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಅನುಷ್ಕಾ ಶೆಟ್ಟಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಮುಂದಿನ ಸುದ್ದಿ
Show comments