ಚಿತ್ರರಂಗದಲ್ಲಿ ಏನೇ ಸಣ್ಣ ಸಂಗತಿ ಆದರೂ ಸಹಿತ ಸಾಕಷ್ಟು ಸುದ್ದಿ ಆಗುತ್ತದೆ. ಅಂತಹ ಸುದ್ದಿಗೆ ಗ್ರಾಸ ಆಗಿದ್ದಾರೆ ದರ್ಶನ್ ತೂಗುದೀಪ್ ಮತ್ತು ಅಮೂಲ್ಯ. ಸ್ಯಾಂಡಲ್ ವುಡ್ ನ ಮೋಹಕ ತಾರೆ ಅಮೂಲ್ಯ. ಆಕೆಯ ಬಗ್ಗೆ ವಿಶೇಷವಾಗಿ ಹೇಳ ಬೇಕಿಲ್ಲ.. ದೂರದರ್ಶನದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಆದ ಈ ಹುಡುಗಿ ಅದಾದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಆದಳು. ತನ್ನ ಅಭಿನಯದ ಜೊತೆ ಜೊತೆ ಆಕೆ ವಿವಾದಗಳ ಮೂಲಕವೂ ಸಹಿತ ಗುರುತಿಸಿಕೊಂಡಳು. ಅವೆಲ್ಲ ಏನೇ ಇರಲಿ ಸಧ್ಯದ ಸ್ಯಾಂಡಲ್ ವುಡ್ ಹಾಟ್ ಫೇವರೇಟ್ ಆಗಿರುವ ಈ ಚೆಲುವೆ ಈಗಷ್ಟೇ ಫಿಲಿಂ ಫೇರ್ 2013ರ ಅತ್ಯುತ್ತಮ ನಟಿ ಪ್ರಶಸಿ ಗಳಿಸಿದ್ದಾಳೆ.
ದರ್ಶನ್ ಅವರು ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವುದಕ್ಕೆ ವಿಶ್ ಮಾಡುತ್ತಾ ಅದನ್ನು ಟ್ವೀಟಿಸಿ ಹೇಳಿದ್ದಾಳೆ. ಹೇಯ್ ಕಂಗ್ರಾಟ್ಸ್ ಬಾಸ್ @ ದರ್ಶನ್ ಫಾ ಮೊಟ್ಟಮೊದಲ ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿರುವುದಕ್ಕೆ .. ಸಕತ್ ಖುಷಿ ಆಗಿದೆ ನನಗೆ. ಈ ಬಗ್ಗೆ ಗುಡ್ ಲಕ್ ಚೀರ್ಸ್ ಎಂದು ಟ್ವೀಟ್ ಮಾಡಿದ್ದಾಳೆ.
ಇದಕ್ಕೆ ಉತ್ತರಿಸಿರುವ ದರ್ಶನ್ @ ಅಮೂಲ್ಯ _ಮೂಲ್ಯ ಥ್ಯಾಂಕ್ಸ್ ಹೀರೋಯಿನ್ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಅದರಲ್ಲೇನು ವಿಶೇಷ ಅಂತ ನಿಮಗೆ ಅನ್ನಿಸ ಬಹುದು , ಆದರೆ ಅಮೂಲ್ಯ ಈವರೆಗೂ ದರ್ಶನ್ ಜೊತೆ ಒಂದೂ ಸಿನಿಮಾದಲ್ಲೂ ಸಹಿತ ಮಾಡಿಲ್ಲ, ಅಂತಹುದರಲ್ಲಿ ಆಕೆ ಬಗ್ಗೆ ಹೀಗೆ ಹೇಳೋದು ಅಂದ್ರೇನು? ದರ್ಶನ್ ಮುಂದಿನ ಚಿತ್ರಕ್ಕೆ ಅಮ್ಮು ಗ್ಯಾರೆಂಟಿ ಹೀರೋಯಿನ್ ಆಗ್ತಾಳೆ ಎನ್ನುವ ಸುದ್ದಿ ಹೆಚ್ಚು ರಭಸವಾಗಿ ಓಡಾಡ್ತಾ ಇದೆ ಗಾಂಧಿನಗರವಾಸಿಗಳ ಮಧ್ಯೆ!