Select Your Language

Notifications

webdunia
webdunia
webdunia
webdunia

ಅತಿಯಾದರೆ ಅಮೃತವು ವಿಷ..ಇದೇನೇ ಆಲಿಯ ನಿನ್ನ ಕಥೆ ?

ಅತಿಯಾದರೆ ಅಮೃತವು ವಿಷ..ಇದೇನೇ ಆಲಿಯ ನಿನ್ನ ಕಥೆ ?
, ಶನಿವಾರ, 29 ನವೆಂಬರ್ 2014 (10:24 IST)
ತನ್ನ ರೂಪವನ್ನು ಮಾತ್ರವಲ್ಲ ಪೆದ್ದುತನವನ್ನು ಸಹಿತ ಜಗತ್ತಿನ ಮುಂದೆ ಇತ್ತು, ಯಾವುದಕ್ಕೂ ಹೆದರದೆ ಜಗ್ಗದೆ ಇರುವ ನಟಿ ಆಲಿಯ ಭಟ್. ತನ್ನ ಪ್ರತಿಭೆಯಿಂದ ಮೇಲೆ ಬಂದ ಈ ಮುದ್ದು ಚೆಲುವೆ ದೊರೆತ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಚೆಲುವೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳ ಬಾರದು ಅಂತಾರೆ. ಆದರೆ ಈ ರೀತಿಯಲ್ಲಿ ಆಲಿಯ ಭಟ್ ಸಹಿತ ಮಾಡೋಕೆ ಹೋಗಿದ್ದಾಳೆ. 

 
ಸ್ಟಾರ್ ಡಂ ಇರುವಾಗ ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳುವ ಸಲುವಾಗಿ  ಅನೇಕರು ಇರುವ ಕಾಲಕ್ಕಿಂತ ಹೆಚ್ಚು ಸಮಯ ನೀಡಿ ಎಲ್ಲಿಯೂ ನಿಲ್ಲಲಾಗದೆ ಒದ್ದಾಡುತ್ತಿದ್ದಾರೆ. ಪ್ರಸ್ತುತ ಇಂತಹ ಕೆಲಸ ಮಾಡಿ ದಣಿದವರಲ್ಲಿ ಪ್ರಿಯಾಂಕ ಚೋಪ್ರ ಹೆಸರು ಕೇಳಿ ಬರುತ್ತಿತ್ತು. ಆದರೆ ಈಗ ಆಲಿಯ ಭಟ್  ಬಂದ ಅವಕಾಶಗಳನ್ನು ಬಿಡದೆ  ಬಳಸಿಕೊಂಡಿದ್ದಾಳೆ. 
 
ಆದರೆ ದೇಹವು ಎಷ್ಟು ತಡೆದುಕೊಳ್ಳುತ್ತದೆ ಕಷ್ಟಗಳನ್ನು ? ಹಾಗೆ ಆಗಿದೆ ಆಲಿಯ ಭಟ್ ವಿಷಯದಲ್ಲೂ ಸಹಿತ. ಆ ಅತಿಯಾದ ದುಡಿತದ ಪರಿಣಾಮದಿಂದ ಆಕೆ ಹಾಸಿಗೆ ಹಿಡಿದಿದ್ದಾಳೆ. 
 
ಯುಕೆ , ಪೋಲೆಂಡ್ ನಲ್ಲಿ ಮಂಜುಗಡ್ಡೆ ಕಟ್ಟಿರುವ ವಾತಾವರಣದಲ್ಲಿ ಆಕೆ ಶಾಂದಾರ್ ಎನ್ನುವ ಸಿನಿಮಾದಲ್ಲಿ ನಟಿಸಲು ಹೋದಳು. ಆ ಚಳಿಯಲ್ಲಿ ನಡೆದ ಶೂಟಿಂಗ್ ಮುಗಿಸಿ ಮುಂಬೈಗೆ  ಬಂದ ಬಳಿಕ ಅತಿಯಾದ ಜ್ವರ ಮತ್ತು ಹೊಟ್ಟೆ ನೋವಿನಿಂದ ಮಲಗಿ ಬಿಟ್ಟಿದ್ದಾಳೆ. ಅತಿಯಾದರೆ ಅಮೃತವು ವಿಷ ಅನ್ನೋದು ಇಂತಹ ಪ್ರಕರಣಗಳಿಗೆ.ಇನ್ನಾದರೂ ಆಲಿಯ ಆರೋಗ್ಯದ ಕಡೆಗೆ ಎಚ್ಚರ ವಹಿಸಲಿ ಎಂದು ಬಾಲಿವುಡ್ ಹಿರಿಯ ಜೀವಗಳು ಮಾತನಾಡಿಕೊಳ್ಳುತ್ತಿದ್ದಾರಂತೆ  !

Share this Story:

Follow Webdunia kannada