Webdunia - Bharat's app for daily news and videos

Install App

ಸಮಂತಾ ಉತ್ತರಕ್ಕೆ ದಂಗಾದ ಅಕ್ಕಿನೇನಿ ನಾಗಾರ್ಜುನ

Webdunia
ಶನಿವಾರ, 13 ಡಿಸೆಂಬರ್ 2014 (09:48 IST)
ಮೀಲೋ   ಎವರು ಕೋಟೀಶ್ವರುಡು  ಕಾರ್ಯಕ್ರಮ ಈಗ ಮತ್ತೆ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮ ಮಾ ಟೀವಿ ಯಲ್ಲಿ ಪ್ರಸಾರ  ಆಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ವಿಶ್ವದ ಮೂಲೆಮೂಲೆಯ ತೆಲುಗು ಮಂದಿಯನ್ನು ಆಕರ್ಷಿಸಿದ ಕಾರ್ಯಕ್ರಮ ಇದಾಗಿದೆ. ಇದರ ಮುಖ್ಯ ಆಕರ್ಷಣೆ  ಅಕ್ಕಿನೇನಿ ನಾಗಾರ್ಜುನ. 
ಕಳೆದ ಅವತರಣಿಕೆಯು ಶೀಘ್ರವಾಗಿ ಮುಗಿದು ಹೋದರೂ ಸಹಿತ ಆ ಕಾರ್ಯಕ್ರಮ ಹೆಚ್ಚು ಗಮನ ಸೆಳೆದಿತ್ತು. ಆ ಬಾರಿ ಅವರು ಸಾಮಾನ್ಯರ ಜೊತೆ ಸಿನಿಮಾದಲ್ಲಿ ಸಾಧಿಸಿರುವ ಅಸಮಾನ್ಯರನ್ನು ಕರೆಯಿಸಿ ತಮ್ಮ ಕಾರ್ಯಕ್ರಮದ ತೂಕ ಹೆಚ್ಚಿಸಿದ್ದರು. ಈ ಬಾರಿ ಈ  ಕಾರ್ಯಕ್ರಮ ಮತ್ತೆ ಆರಂಭವಾಗಿದೆ. ಅದರಲ್ಲಿ ಸಹಿತ ಈಗ ಸಾಕಷ್ಟು ಸಾಧಕರು ಬರುತ್ತಿದ್ದಾರೆ. ಮುಖ್ಯವಾಗಿ  ನಾಗಾರ್ಜುನ್ ತಮ್ಮ  ಆಪ್ತ  ವಲಯಕ್ಕೆ  ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎನ್ನುವ ಅಂಶ ಕೇಳಿ ಬರುತ್ತಿದೆ. 
 
ಸಮಂತ ಆ ವಲಯಕ್ಕೆ ಸೇರಿರುವ ಬೊಂಬೆ. ಆಕೆ ಇತ್ತೀಚಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 6.5 ಲಕ್ಷ ರೂಪಾಯಿಗಳನ್ನು ಗೆದ್ದು ಎಲ್ಲರನ್ನು  ತನ್ನತ್ತ ಸೆಳೆದಳು. ಅಷ್ಟೇ ಅಲ್ಲದೆ ಯಾವುದೇ ಪ್ರಶ್ನೆಗೂ ಸಹಿತ ತಬ್ಬಿಬ್ಬಾಗದೆ, ಸರಿಯಾದ ಉತ್ತರಗಳನ್ನು ಚಕಚಕ ಎಂದು ಹೇಳಿ ಖುದ್ದು ನಾಗಾರ್ಜುನ ಅವರನ್ನು ಆಶ್ಚರ್ಯ ಗೊಳಿಸಿದ್ದಾಳೆ ಎನ್ನುವ ಸುದ್ದಿ ಈಗ ಹೆಚ್ಚಿನ ಪ್ರಾಮುಖ್ಯತೆ ಪಡೆದು ಕೊಂಡಿದೆ. ಕೇವಲ ಗ್ಲಾಮರ್ ಪಾತ್ರಗಳಲ್ಲಿ ಮಾಡುತ್ತಾ, ಬರೆದು ಕೊಟ್ಟಿರುವುದನ್ನು ಓದುತ್ತಾ ಬೇರೆ ಯಾವುದೇ ಬಗೆಯ ಬುದ್ಧಿವಂತಿಕೆ ಪ್ರದರ್ಶಿಸರು  ನಟಿಯರು  ಎನ್ನುವ ನಂಬಿಕೆ ಹೊಂದಿದ್ದ ಮಂದಿಗೆ ಸಮಂತ ತನ್ನ ಇನ್ನೊಂದು ಶೈಲಿಯಿಂದ  ಎಲ್ಲರ ಗಮನ ತನ್ನತ್ತ ಸೆಳೆದಿದ್ದಾಳೆ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments