Webdunia - Bharat's app for daily news and videos

Install App

ಉದಯ್ ಮೆಹ್ತಾ ಚಿತ್ರಕ್ಕೆ ಅಜಯ್ ರಾವ್ ನಾಯಕ ನಟ

Webdunia
ಸೋಮವಾರ, 29 ಜೂನ್ 2015 (10:29 IST)
ಅಜಯ್ ಕೃಷ್ಣ ರಾವ್ ಅವರು ಈಗ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಕನ್ನಡದ ಪ್ರಸಿದ್ಧ ನಿರ್ಮಾಪಕ ಉದಯ್ ಮೆಹ್ತಾ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ ಅಜಯ್. ಕನ್ನಡದ ಚಾರ್ಮಿಂಗ್ ನಟ ಅಜಯ್ ಅವರು ತಮ್ಮ ಅಭಿನಯ ಹಾಗೂ ರೂಪದಿಂದ ಹುಡುಗಿಯರ ಮನ ಕದ್ದ   ಚೆಲುವೆ. ಇವರ ಚಿತ್ರಗಳು  ಎಲ್ಲರಿಗೂ ಇಷ್ಟವಾಗುವಂತಹ ಕಥಾಹಂದರ ಹೊಂದಿರುತ್ತದೆ. ಇತ್ತೀಚೆಗೆ ಅವರ ಕೃಷ್ಣಲೀಲಾ ಬಿಡುಗಡೆ ಆಯಿತು, ಅದು ಅಜಯ್ ಅವರ ಹೋಂ ಪ್ರೊಡಕ್ಷನ್. ಆ ಚಿತ್ರವನ್ನು ಶಶಾಂಕ್ ಅವರು ನಿರ್ದೇಶನ ಮಾಡಿದ್ದರು.
ಬಚ್ಚನ್ ಚಿತ್ರದ ನಿರ್ದೇಶನ ಮಾಡಿದ್ದ ಶಶಾಂಕ್  ಕೃಷ್ಣಲೀಲ ಚಿತ್ರವನ್ನು ನಿರ್ದೇಶಿಸಿದ್ದರು. ಅಜಯ್  ಅವರು  ತಾಯಿಗೆ ತಕ್ಕ ಮಗ  ಚಿತ್ರವನ್ನೂ ಸಹಿತ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದರು. ಈಗ ಮೆಹ್ತಾ ಅವರ ಹೊಸ ಚಿತ್ರವನ್ನು ಶಶಾಂಕ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಈಗ ಶಶಾಂಕ್ ಅವರು ಗಣೇಶ್ ಅಭಿನಯದ ಮುಂಗಾರು ಮಳೆ 2 ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಜಯ್ ಅವರ ಈ ಹೊಸ ಚಿತ್ರ ಆಗಸ್ಟ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಈ ಹೊಸ ಚಿತ್ರಕ್ಕೆ  ಅಜಯ್ ಅವರು ಇತ್ತೀಚೆಗೆ ಸಹಿ ಹಾಕಿದ್ದಾರೆ. ಅಜಯ್ ಅಭಿಮಾನಿಗಳಿಗೆ ಈ ಹೊಸ ಚಿತ್ರ ಯಾವುದು ಎನ್ನುವ ಕುತೂಹಲ ಆರಂಭವಾಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments