Webdunia - Bharat's app for daily news and videos

Install App

ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ತಿರಸ್ಕರಿಸಿದ್ದರ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಶ್ರೀದೇವಿ

Webdunia
ಶುಕ್ರವಾರ, 9 ಜೂನ್ 2017 (09:38 IST)
ಮುಂಬೈ: ಬಾಹುಬಲಿ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಮಹಾರಾಣಿ ಶಿವಗಾಮಿ ಪಾತ್ರಕ್ಕೆ ಮೊದಲ ಆಯ್ಕೆ ರಮ್ಯಾ ಕೃಷ್ಣ ಆಗಿರಲಿಲ್ಲ. ಬಾಲಿವುಡ್ ನಟಿ ಶ್ರೀದೇವಿಗೆ ನಿರ್ದೇಶಕ ರಾಜಮೌಳಿ ಈ ಪಾತ್ರ ನಿಭಾಯಿಸುವಂತೆ ಕೇಳಿಕೊಂಡಿದ್ದರು ಎಂಬುದು ಭಾರೀ ಸುದ್ದಿಯಾಗಿತ್ತು.

 
ಶ್ರೀದೇವಿ ಯಾಕೆ ಇಂತಹ ಅದ್ಭುತ ಪಾತ್ರವನ್ನು ತಿರಸ್ಕರಿಸಿದರು? ಎಂದು ಅಭಿಮಾನಿಗಳಿಂದ ಹಿಡಿದು ಖ್ಯಾತ ಸಿನಿಮಾ ನಿರ್ದೇಶಕರವರೆಗೂ ಎಲ್ಲರೂ ಪ್ರಶ್ನಿಸಿದ್ದರು. ಇದೀಗ ಸ್ವತಃ ಶ್ರೀದೇವಿ ಅದರ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಅದಾಗ  ತಾನೇ ತಮಿಳಿನ ಪುಲಿ ಚಿತ್ರದಲ್ಲಿ ಐತಿಹಾಸಿಕ ಪಾತ್ರ ಮಾಡಿದ್ದರು ಶ್ರೀದೇವಿ. ಆದರೆ ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಬಹುಶಃ ಇದೇ ಕಾರಣಕ್ಕೋ ಏನೋ, ಅವರು ಮತ್ತೆ ಅಂತಹ ಪಾತ್ರ ತಿರಸ್ಕರಿಸಿದರು.

ನಂತರ ಆ ಪಾತ್ರವನ್ನು ರಮ್ಯ ಕೃಷ್ಣ ಮಾಡಿ ಜನಮೆಚ್ಚುಗೆಗೆ ಪಾತ್ರರಾದರು. ಚಿತ್ರವನ್ನೂ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. ‘ಇಂತಹ ಸಮಯದಲ್ಲಿ ನಾನ್ಯಾಕೆ ಆ ಪಾತ್ರ ನಿರ್ವಹಿಸಲಿಲ್ಲ ಎಂದು ಚರ್ಚೆಗಳಾಗುವ ಅಗತ್ಯವಿದೆಯೇ? ನನ್ನ ಬದಲಿಗೆ ಇನ್ನೊಬ್ಬ ನಟಿ ಆ ಪಾತ್ರ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಶ್ರೀದೇವಿ ಪ್ರತಿಕ್ರಿಯೆ ನೀಡಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments