Webdunia - Bharat's app for daily news and videos

Install App

ನಟಿ ಮೇಘನಾ ರಾಜ್‌ ಮಗನ ಕನ್ನಡ ಪ್ರೇಮಕ್ಕೆ ಎಲ್ಲರೂ ಫಿದಾ

Sampriya
ಶುಕ್ರವಾರ, 8 ನವೆಂಬರ್ 2024 (17:36 IST)
Photo Courtesy X
ಈಚೆಗಷ್ಟೇ ನಾಲ್ಕು ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ಮೇಘನಾ ಹಾಗೂ ಚಿರಂಜೀವಿ ಪುತ್ರ ರಾಯನ್ ರಾಜ್ ಸರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರ ಮನಸ್ಸು ಗೆಲ್ಲುತ್ತಿದ್ದಾರೆ. ಹೌದು ಇದಕ್ಕೆಲ್ಲ ಕಾರಣ ರಾಯನ್ ರಾಜ್ ಹಾಡಿದ ಹಾಡು.

ಈಗೀನ ಕಾಲದಲ್ಲಿ ಯಾವ ಮಕ್ಕಳ ಬಾಯಲ್ಲೂಇಂಗ್ಲಿಷ್ ಹಾಡುಗಳೇ ಬರುತ್ತದೆ. ಆದರೆ ಸ್ಟಾರ್ ನಟಿಯ ಮಗನೊಬ್ಬ ಅಚ್ಚ ಕನ್ನಡದಲ್ಲಿ ಕನ್ನಡದ ಪದ್ಯವನ್ನು ಹಾಡಿದ್ದು ಇದೀಗ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ರಾಯನ್ ರಾಜ್ ಸರ್ಜಾ ಅವರು ಹಚ್ಚೇವು ಕನ್ನಡದ ದೀಪ. ಕರುನಾಡ ದೀಪ. ಸಿರಿನುಡಿಯ ದೀಪ. ಒಲವೆತ್ತಿ ತೋರುವ ದೀಪ. ಹಚ್ಚೇವು ಕನ್ನಡದ ದೀಪ ಅಂತಾ ಮುದ್ದಾಗಿ ಹಾಡಿದ್ದಾನೆ.

ವಿಡಿಯೋ ಜತೆಗೆ ಬರೆದುಕೊಂಡಿರುವ ಮೇಘನಾ ಅವರು, ಹೆಮ್ಮೆಯ ಗಳಿಗೆ! ನಿನ್ನೆ ರಾಯನ್ ಹಚ್ಚೇವು ಕನ್ನಡದ ದೀಪ ಎಂದು ಹಾಡಿದ. ನಿನಗೆ ಈ ಹಾಡು ಹೇಗೆ ಗೊತ್ತು ಅಂತ ಕೇಳ್ದಾಗ ಸ್ಕೂಲಲ್ಲಿ ಹೇಳ್ಕೊಟ್ರು ಅಮ್ಮ ಎಂದು ಹೇಳಿದ.. ಈ ವಿಡಿಯೋ ಜೊತೆಗೆ ಎಂಥ  ನಾನು ರೆಕಾರ್ಡ್​ ಮಾಡಿಕೊಂಡೆ. ಮನೆ ಮಾತ್ರ ಅಲ್ಲ. ನಮ್ಮ ಸುತ್ತ ಇರುವ ವಾತಾವರಣದ ಪ್ರಭಾವ ನಮ್ಮ ಮೇಲಿರುತ್ತೆ. ನಾನೊಬ್ಬ ಕನ್ನಡಿಗಳಾಗಿ ಪ್ರತಿನಿತ್ಯ ನನ್ನ ಭಾಷೆ ಸಂಭ್ರಮಿಸುತ್ತೇನೆ. ಇನ್ನು ಮುಂದೆ ಈ ತಿಂಗಳನ್ನ 'ನಮ್ಮ ನವೆಂಬರ್' ಎಂದು ಕರೆಯೋಣ? ಅಂತ ಬರೆದುಕೊಂಡಿದ್ದಾರೆ.

ಸದ್ಯ ರಾಯನ್ ರಾಜ್ ಸರ್ಜಾ ಇದೀಗ ಎಲ್ಲರ ಮನಸ್ಸನ್ನು ಗೆದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  ಇದನ್ನು ನೋಡಿದ ನೆಟ್ಟಿಗರು ಒಳ್ಳೆಯದಾಗಲಿ ಮಗುವಿಗೆ. ಕನ್ನಡದ ಕಂದ ನಮ್ಮ ರಾಯನ್ ಎಂದು ಹೊಗಳುತ್ತಿದ್ದಾರೆ.  ಅಕ್ಟೋಬರ್​ 22ರ 2020ರಂದು ಹುಟ್ಟಿರುವ ರಾಯನ್​ ಈಗ ಕ್ಯೂಟ್‌ ಆಗಿ ಮಾತನಾಡುತ್ತಾನೆ. ತನ್ನ ತಂಗಿ ರುದ್ರಾಕ್ಷಿ, ತಾತನ ಜತೆಗಿರುವ ಕ್ಯೂಟ್ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments