Webdunia - Bharat's app for daily news and videos

Install App

ಶ್ರುತಿಹಾಸನ್ ವಿರುದ್ಧ ಕಿಡಿಕಾರಿದ ಖುಷ್ಬೂ..!

Webdunia
ಶುಕ್ರವಾರ, 21 ಜುಲೈ 2017 (12:02 IST)
ಸಂಘಮಿತ್ರ ಸಿನಿಮಾದಿಂದ ಹೊರಬಂದ ನಟಿ ಶ್ರುತಿಹಾಸನ್ ವಿರುದ್ಧ ನಿರ್ದೇಶಕ ಸುಂದರ್ ಪತ್ನ ನಟಿ ಖುಷ್ಬೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ವೃತ್ತಿಪರತೆ ಪ್ರದರ್ಶಿಸುವಂತೆ ಕಿಡಿ ಕಾರಿದ್ಧಾರೆ.  
 

ನಿರ್ದೇಶಕ ಸುಂದರ್ ಕನಸಿನ ಕೂಸು ಸಂಘಮಿತ್ರ.. 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪೋಸ್ಟರನ್ನ ಇತ್ತೀಚೆಗೆ ತಾನೆ ಕೇನ್ ಚಿತ್ರೋತ್ಸವದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಅದೇನಾಯ್ತೋ ನಟಿ ಶ್ರುತಿ ಹಾಸನ್, ಚಿತ್ರಕಥೆ ಇಷ್ಟವಾಗಿಲ್ಲ ಅಂತಾ ಚಿತ್ರದಿಂದ ಹೊರಬಂದಿದ್ದರು. ಶ್ರುತಿ ಹೊರಬಂದ ಬಳಿಕ ಪಾತ್ರಕ್ಕೆ ಸೂಕ್ತ ನಟಿಯನ್ನ ಆರಿಸುವಲ್ಲಿ ಚಿತ್ರ ತಂಡ ಶತ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಈ ಅಸಮಾಧಾನವನ್ನ ಹಿರಿಯ ನಟಿ ಖುಷ್ಬೂ ಟ್ವೀಟ್ಟರ್`ನಲ್ಲಿ ಹೊರ ಹಾಕಿದ್ದಾರೆ.

ದೊಡ್ಡ ಚಿತ್ರರಂಗದ ಹಿನ್ನೆಲೆಯಿಂದ ಬರುವವರಿಂದ ನಾವು ಸ್ವಲ್ಪ ಜಾಸ್ತಿ ವೃತ್ತಿಪರತೆಯನ್ನ ನಿರೀಕ್ಷಿಸುತ್ತೇವೆ. ತಪ್ಪುಗಳನ್ನ ಸರಿ ಮಾಡಿಕೊಂಡರೆ ಸುದೀರ್ಘ ವೃತ್ತಿ ಜೀವನಕ್ಕೆ ಅನುಕೂಲವಾಗುತ್ತೆ ಎಂದಿದ್ಧಾರೆ. ಸ್ಕ್ರಿಪ್ಟ್ ರೆಡಿಯಾಗಿಲ್ಲ ಎಂಬ ಶ್ರುತಿ ಹೇಳಿಕೆಗೆ ಟಾಂಗ್ ನೀಡಿರುವ ಖುಷ್ಬೂ, ದೇಶದ ಅತ್ಯಂತ ದುಬಾರಿ ಬಜೆಟ್ 400 ಕೋಟಿ ರೂ. ಸಿನಿಮಾಕ್ಕೆ ಅತ್ಯುತ್ತಮ ಯೋಜನೆ ಮಾಡದೇ ಇರುತ್ತೀವಾ..? 2 ವರ್ಷಗಳಿಂದ ಚಿತ್ರಕಥೆ ತಯಾರಿ ನಡೆದಿದೆ. ಶೇ.70ರಷ್ಟು ಪೂರ್ವ ನಿರ್ಮಾಣ ತಯಾರಿ ಕೇವಲ 30ರಷ್ಟು ಶೂಟಿಂಗ್ ಮಾತ್ರ, ನಿಮ್ಮ ವೈಯಕ್ತಿಕ ತಪ್ಪುಗಳಿಗಾಗಿ ಚಿತ್ರದ ಕಥೆ ದೂಷಿಸುವುದು.. ಕೈಗೆಟುಕದ ದ್ರಾಕ್ಷಿ ಹುಳಿ ಎಂಬ ಮಾತಿನಂತಿದೆ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments