ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೃದಯಾಘಾತದಿಂದ ಸಾವಪ್ಪಿದ ಬಗ್ಗೆ ಹಿರಿಯ ನಟ ಸುಮನ್ ಕಣ್ಣೀರು ಮಿಡಿದಿದ್ದಾರೆ. ಆಸ್ಪತ್ರೆಯಿಂದ ಅವರು ಪರಿಪೂರ್ಣ ಆರೋಗ್ಯದಿಂದ ಹಿಂತಿರುಗುತ್ತಾರೆ ಎಂದು ಭಾವಿಸಿದ್ದೆವು. ಆದರೆ ಈ ರೀತಿ ಜರುಗಿದ್ದು ತುಂಬಾ ದುಃಖಕರ ಎಂದಿದ್ದಾರೆ. ಅವರು ಮತ್ತು ನಾನು ಚೆನ್ನೈನ ಚರ್ಚ್ ಪಾರ್ಕ್ ಸ್ಕೂಲಲ್ಲಿ ಓದಿದ್ದು.
ನಾನು ಥರ್ಡ್ ಸ್ಟ್ಯಾಂಡರ್ಡ್ ಓದುತ್ತಿದ್ದಾಗ ಜಯಲಲಿತಾ ಸೀನಿಯರ್. ಅವರು ಶೂಟಿಂಗ್ಗೆ ಹೋಗುವುದನ್ನು ನನಗೆ ಇನ್ನೂ ಚೆನ್ನಾಗಿ ಜ್ಞಾಪಕ ಇದೆ ಎಂದು ಸುಮಲ್ ನೆನಪಿಸಿಕೊಂಡಿದ್ದಾರೆ.
ನಟಿಗಿಂತಲೂ ಅವರು ಒಳ್ಳೇ ಡಾನ್ಸರ್ ಆಗಿ ಜಯಲಲಿತಾ ಗುರುತಿಸಿಕೊಂಡಿದ್ದರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ರಾಜಕೀಯಕ್ಕೆ ಬಂದು ಸಕ್ಸಸ್ ಆದರು. ಈ ಪಯಣದಲ್ಲಿ ಸಾಕಷ್ಟು ಅವಮಾನಗಳಾದರೂ ಭರಿಸಿ ಜನರ ಪ್ರೀತಿ ಗಳಿಸಿ ಮಾಸ್ ಲೀಡರ್ ಆದರು.
ಬಡವರಿಗೆ ವಿಶೇಷ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಮ್ಮ ಎಂದು ಕರೆಸಿಕೊಂಡರು. ಮುಖ್ಯವಾಗಿ ಅಮ್ಮ ಕ್ಯಾಂಟೀನ್ ಬಡವರ ಹೃದಯದಲ್ಲಿ ಭದ್ರ ಸ್ಥಾನ ಗಿಟ್ಟಿಸುವಲ್ಲಿ ಸಹಾಯವಾಯಿತು ಎಂದು ಸುಮನ್ ನೆನಪಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.