Webdunia - Bharat's app for daily news and videos

Install App

ಏನೋ ಹೇಳಲು ಹೋಗಿ ಇನ್ನೇನೋ ಮಾಡಿಕೊಂಡ ನಟ ಜೆಕೆ!

Webdunia
ಮಂಗಳವಾರ, 3 ಅಕ್ಟೋಬರ್ 2017 (10:48 IST)
ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಜನರಿಗೆ ಸೂಪರ್ ಸ್ಟಾರ್ ಜೆಕೆ ಎಂದೇ ಪರಿಚಿತರಾದ ನಟ ಜಯರಾಂ ಕಾರ್ತಿಕ್ ಸುಖಾ ಸುಮ್ಮನೇ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.


 
ಇದೆಲ್ಲಾ ಶುರುವಾಗಿದ್ದು ಜೆಕೆ ಹಾಕಿದ ಒಂದು ಫೇಸ್ ಬುಕ್ ಪೋಸ್ಟ್ ನಿಂದ. ಹಿಂದಿಯ ಪೌರಾಣಿಕ ಧಾರವಾಹಿಯೊಂದರಲ್ಲಿ ರಾವಣನ ಪಾತ್ರ ಮಾಡಿದ್ದ ಜೆಕೆಯನ್ನು ಪತ್ರಿಕೆಯೊಂದು ಹಿಂದಿ ಧಾರವಾಹಿಗಳಲ್ಲಿ ನಂ.1 ರಾವಣ ಎಂದು ಮೆಚ್ಚಿ ಬರೆದಿತ್ತು.

ಇದನ್ನು ಉಲ್ಲೇಖಿಸಿ ಜೆಕೆ ತಮ್ಮ ಫೇಸ್ ಬುಕ್ ನಲ್ಲಿ ‘ನನ್ನನ್ನು ಗುರುತಿಸಿ ಅವಕಾಶ ಕೊಟ್ಟ ಬಾಲಿವುಡ್ ಗೆ ಧನ್ಯವಾದಗಳು. ಕನ್ನಡದಲ್ಲಿ ಯಾವ ಪೌರಾಣಿಕ ಪಾತ್ರಕ್ಕೆ ನನ್ನನ್ನು ರಿಜೆಕ್ಟ್ ಮಾಡಿದರೋ ಅದೇ ಪಾತ್ರದಲ್ಲಿ ಬಾಲಿವುಡ್ ನನ್ನನ್ನು ಗುರುತಿಸಿತು. ಸಣ್ಣ ಕೊಳದಲ್ಲಿರುವುದಕ್ಕಿಂತಲೂ ಸಮುದ್ರದಲ್ಲಿರುವುದನ್ನು ಇಷ್ಟಪಡುತ್ತೇನೆ’ ಎಂದು ಬರೆದಿದ್ದರು.

ಜೆಕೆಯ ಈ ಮಾತನ್ನು ತಪ್ಪಾಗಿ ಅರ್ಥೈಸಿದ ಅಭಿಮಾನಿಗಳು ಸಮುದ್ರ ಎಂದರೆ ಬಾಲಿವುಡ್, ಕೊಳ ಎಂದರೆ ಸ್ಯಾಂಡಲ್ ವುಡ್ ಎಂದು ಜೆಕೆ ಮೇಲೆ ಮುಗಿಬಿದ್ದರು. ಕೊನೆಗೆ ನಟ ಜೆಕೆ ತಮ್ಮ ಪೋಸ್ಟ್ ಗೆ ಸ್ಪಷ್ಟನೆ ಕೊಟ್ಟಿದ್ದು, ಸಮುದ್ರ ಎಂದರೆ ಕಷ್ಟ, ಕಷ್ಟವನ್ನು ಈಜಿ ಮೇಲೇಳಲು ಇಷ್ಟಪಡುತ್ತೇನೆ. ಕೊಳ ಎಂದರೆ ಆರಾಮವಾಗಿರಬಹುದು. ಅಲ್ಲಿ ಸವಾಲುಗಳಿರುವುದಿಲ್ಲ ಎಂಬ ಅರ್ಥದಲ್ಲಿ ಈ ಮಾತು ಹೇಳಿದ್ದೇನೆ ಎಂದು ಸ್ಪಷ್ಟನೆ ಕೊಡುವಲ್ಲಿಗೆ ಪ್ರಕರಣ ಅಂತ್ಯ ಕಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ದರ್ಶನ್ ಮಾತಾಡೋವರೆಗೂ ಇದೊಂದು ಕೆಲಸ ಮಾಡಲ್ವಂತೆ ಪ್ರಥಮ್

ರಮ್ಯಾ ಆಮೇಲೆ, ಮೊದಲು ಯುವ ಪತ್ನಿಗೆ ನ್ಯಾಯ ಕೊಡಿಸಿ: ಶಿವಣ್ಣಗೆ ಡಿಬಾಸ್ ಫ್ಯಾನ್ಸ್ ಎಚ್ಚರಿಕೆ

ಡಿಬಾಸ್ ಫ್ಯಾನ್ಸ್ ರಮ್ಯಾ ಕದನಕ್ಕೆ ಶಿವಣ್ಣನ ಎಂಟ್ರಿ, ಹೇಳಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments