Webdunia - Bharat's app for daily news and videos

Install App

ಕಾಲಿವುಡ್ ನಟ ಅಜಿತ್ ಕ್ಷಮೆ ಯಾಚಿಸಿದ್ದು ಯಾರ ಬಳಿ, ಯಾಕೆ ?!

Webdunia
ಶುಕ್ರವಾರ, 6 ಮಾರ್ಚ್ 2015 (10:22 IST)
ಅಜಿತ್ ಅವರ ನಟನೆಯ ಯೆನ್ನೈ ಅರಿಂದಾಲ್ ಚಿತ್ರ ಈಗ ಕಳೆದ 25 ದಿನಗಳಿಂದ ಥಿಯೇಟರ್‌ನಲ್ಲಿ ಭರ್ಜರಿಯಾಗಿ ಮುನ್ನಡೆಯುತ್ತಿದೆ. ವೀರಮ್ ಚಿತ್ರದಲ್ಲಿ ಹಾಸ್ಯ ನಟಿಯಾಗಿದ್ದ ವಿದ್ಯುಲ್ಲೇಖ ಅವರು ಈ ಚಿತ್ರವನ್ನು ವೀಕ್ಷಿಸಿ ಅಜಿತ್ ಅವರ ತುಂಬಾ ಸುಂದರವಾದ ಚಿತ್ರ ಹಾಗೂ ಅದ್ಭುತವಾದ ನಟನೆ ಎಂದು ಟ್ವೀಟ್ ಮಾಡಿ ಹೇಳಿದ್ದರು. ಆದರೆ ಅವರ ಅಭಿನಂದನೆಗೆ ತಕ್ಷಣ ಪ್ರತಿಕ್ರಿಯೆ ನೀಡದೆ ಇದ್ದರೂ ಸ್ವಲ್ಪ ದಿನಗಳ ನಂತರ ಉತ್ತರಿಸಿ ಕ್ಷಮೆ ಯಾಚಿಸಿದ್ದಾರೆ ಆ ಮಹಾನ್ ತಾರೆ ತಮ್ಮ ತಡವಾದ ಪ್ರತಿಕ್ರಿಯೆಗೆ. ಇತ್ತೀಚೆಗಷ್ಟೇ ಗಂಡು ಮಗುವಿನ ತಂದೆ ಆಗಿರುವ ಅಜಿತ್ ಈಗ ಸಂಪೂರ್ಣವಾಗಿ ಮನೆ ಮಕ್ಕಳು ಎಂದು ಬ್ಯುಸಿ ಆಗಿದ್ದಾರೆ. 
ಈ ಮಧ್ಯೆ ಅವರು ಸೋಶಿಯಲ್ ನೆಟ್‌ವರ್ಕ್ ಕಡೆ ಗಮನ ನೀಡದೆ ಇದ್ದು ತಮ್ಮ ಸಹನಟಿಯ ಅಭಿಪ್ರಾಯಕ್ಕೆ ಉತ್ತರ ನೀಡಿರಲಿಲ್ಲ. ಆಕೆ ಮುಂಜಾನೆ ಎದ್ದಾಗ ತಲ ಅವರ ಸಂದೇಶ ಕಾಯುತ್ತಿತ್ತು. ಅದರಲ್ಲಿ ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆ ಯಾಚಿಸಿದ್ದರು. ಎಂತಹ ಅದ್ಭುತ ನಟ ವಾವ್ ಎಂದು ಆಕೆ ಟ್ವೀಟಿಸಿ ಹೇಳಿದ್ದಾರೆ. ಅನೇಕ ಕಲಾವಿದರು ಇವರಿಂದ ಕಲಿಯುವುದು ಸಾಕಷ್ಟಿದೆ. ತಲ ಯಾವ ಕಾರಣದಿಂದ ಅಷ್ಟು ಉನ್ನತ ಸ್ಥಾನದಲ್ಲಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ ವಿದ್ಯುಲ್ಲೇಖಾ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments