Webdunia - Bharat's app for daily news and videos

Install App

ಸಂಗೀತ ಸಂಯೋಜನೆಯಿಂದ ದೂರ ಸರಿದ ಎ.ಆರ್.ರೆಹಮಾನ್...?!

Webdunia
ಸೋಮವಾರ, 2 ಮಾರ್ಚ್ 2015 (10:13 IST)
ಎ.ಆರ್.ರೆಹಮಾನ್ ಕೆಲವ ಭಾರದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅಭಿಮಾನಿಗಳನ್ನು ಪಡೆದ ಪ್ರತಿಭೆ. ಅವರ ಆಗ್ಗೆ ಹೇಳುವುದಾದರೆ ಕೋಟ್ಯಾಂತರ ಅಭಿಮಾನಿಗಳು ವಿಶ್ವಾದ್ಯಂತ ಇದ್ದಾರೆ. ತಮ್ಮ ಸಂಗೀತ ಸಂಯೋಜನೆಯಿಂದ ಅವರು ತಮಿಳು ಹಾಗೂ ಹಿಂದಿ ಚಿತ್ರಗಳು ಮಾತ್ರವಲ್ಲದೆ ಇನ್ನು ಅನೇಕ ಭಾಷೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಈಗ ಅವರು ಮೊಹಮದ್ ಪೈಗಂಬರ್ ಅವರ ಜೀವನ ಚರಿತ್ರೆಯ ಮಜೀದ್ ಮಜೀದಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚಿಗೆ ನಡೆದ ಅವರ ಸಂದರ್ಶನದಲ್ಲಿ ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನದಿಂದ ಸ್ವಲ್ಪ ಕಾಲ ದೂರ ಸರಿಯುತ್ತಿದ್ದಾರೆ. ಅವರು ಈಗ ಚಿತ್ರಕಥೆ ಬರೆಯುವತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರಂತೆ. 
ತಮ್ಮ ಜೀವಮಾನದಲ್ಲಿ ಅನೇಕ ಸ್ತರಗಳ, ಮನೋ ಭಾವಗಳ, ಹಿನ್ನೆಲೆಯ ಜನರನ್ನು ಭೇಟಿ ಮಾಡಿರುವುದನ್ನು ತಿಳಿಸುತ್ತಾ ಅವರ ಅನುಭವಗಳ ಆಧಾರಿತ ಕಥೆಯನ್ನು ರಚಿಸಲು ಈಗ ತಮ್ಮ ಗಮನ ನೆಟ್ಟಿರುವುದಾಗಿ ಹೇಳಿದ್ದಾರೆ. ಹಾಗಂತ ಅವರು ಈಗಿರುವಂತಹ ಹಾಗೂ ಅವರನ್ನು ಜನರು ಯಾವ ಕಾರಣದಿಂದ ಮೆಚ್ಚಿದ್ದಾರೋ ಆ ಕ್ಷೇತ್ರದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ ರೆಹಮಾನ್. ಅವರನ್ನು ಜನರು ಅತಿಯಾಗಿ ಇಷ್ಟ ಪಡುವುದು ಸಂಗೀತ ಸಂಯೋಜನೆಯಿಂದ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಕಳೆದ ಎರಡು ವರ್ಷಗಳಿಂದ ಸಂಗೀತ ಸಂಯೋಜನೆ ಮಾಡುತ್ತಾ ವಿಶ್ವದ ಪ್ರತಿಷ್ಟಿತ ಪ್ರಶಸ್ತಿ ಆಸ್ಕರ್‌ನ್ನು ಸಹಿತ ಪಡೆದ ಈ ಅಪರೂಪದ ಪ್ರತಿಭೆಯ ಚಿತ್ರಕಥೆಯ ಬಗ್ಗೆ ಅವರ ಅಭಿಮಾನಿಗಳಿಗೆ ಬಹಳ ಕುತೂಹಲವಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments