ಆದರೆ ಈಗ ಹೇಳ ಹೊರಟಿರುವ ಸಂಗತಿ ಎಂದರೆ ಅಂಬಿ ಅವರ ಆರೋಗ್ಯದ ತಪಾಸಣೆಯನ್ನು ಆಗಾಗ ಮಾಡ ಬೇಕಾದ ಕಾರಣ ತಕ್ಷಣವೇ ಅವರು ಬೆಂಗಳೂರಿಗೆ ಬರುವಂತಿಲ್ಲ. ಆದ ಕಾರಣ ಅವರು ಮಲೇಶಿಯಾ ದೇಶಕ್ಕೆ ಹೋಗುತ್ತಿದ್ದಾರೆ ವಿಶ್ರಾಂತಿ ಪಡೆಯಲು. ಏತನ್ಮಧ್ಯೆ ಚುನಾವಣೆಯ ಸಲುವಾಗಿ ಒಮ್ಮೆ ಬೆಂಗಳೂರಿಗೂ ಬಂದು ಹೋಗುವ ಸಾಧ್ಯತೆ ಇದೆ. ಏಕೆಂದರೆ ಅಂಬರೀಶ್ ಅವರು ನಿರಂತರವಾಗಿ ಎರಡು ವಾರಗಳಾದರೂ ಅಲ್ಲಿ ನೆಲೆಸಿರ ಬೇಕಾಗಿದೆ.
ಅಂಬರೀಷ್ ಅವರ ಮಿತ್ರ ಅಲ್ಲಿನ ಸ್ಥಳೀಯ ರಾಜ ಸಂಪೂರ್ಣವಾಗಿ ಇವರ ಆರೋಗ್ಯದ ಹೊಣೆ ಹೊತ್ತು ಅವರನ್ನು ಮಲೇಶಿಯಾದಲ್ಲಿ ನೆಲೆಸಲು ಅವಕಾಶ ಮಾಡಿದ್ದಾರೆ. ಒಟ್ಟಾರೆ ಅಪಾರ ಅಭಿಮಾನಿಗಳ ಹಾರೈಕೆಯಿಂದ ಡಾ. ಅಂಬರೀಷ್ ಅನಾರೋಗ್ಯವನ್ನು ಗೆದ್ದಿದ್ದಾರೆ. ಅವರು ಬೇಗ ತಾಯ್ನಾಡಿಗೆ ಹಿಂತಿರುಗಿ ಮತ್ತೆ ಅಭಿಮಾನಿಗಳ ಮನ ತಣಿಸಲಿ.