Select Your Language

Notifications

webdunia
webdunia
webdunia
webdunia

ಸ್ಯಾಂಡಲ್‌ವುಡ್ ಚಿನಕುರುಳಿ ಜೆನ್ನಿಗೆ ಕೈಗೆ 'ವಜ್ರ' ಸಿಕ್ಕಿದೆ

ಸ್ಯಾಂಡಲ್‌ವುಡ್ ಚಿನಕುರುಳಿ ಜೆನ್ನಿಗೆ ಕೈಗೆ 'ವಜ್ರ' ಸಿಕ್ಕಿದೆ
MOKSHA
ಕನ್ನಡ ಚಿತ್ರರಂಗದ ಗ್ಲಾಮರ್, ಸೆಕ್ಸಿ ಜೆನ್ನಿಫರ್ ಕೊತ್ವಾಲ್ ಚಿತ್ರದಲ್ಲಿ ಇದ್ದಾಳೆ ಎಂದರೆ ಪಡ್ಡೆ ಹುಡುಗರು 'ಚುಕು ಬುಕು ರೈಲು...' ಎಂದು ಎಗರೆಗರಿ ಕುಣೀತಾರೆ ಎಂದುಕೊಂಡು ಸ್ವತಃ ಜೆನ್ನಿ ಕೂಡ ಚಿಗರೆಯಂತಾಡುವವರು. ಈ ಆಮದು ಬೆಡಗಿ ಈಗ ಸಖತ್ ಡಿಮಾಂಡಂತೆ. ಅದಕ್ಕೆ ಕಾರಣ ಇತ್ತೀಚೆಗಷ್ಟೇ ಹಿಟ್ ಹಣೆಪಟ್ಟಿ ಹಚ್ಚಿಸಿಕೊಂಡ 'ಹುಲಿ'.

ಜೆನ್ನಿ ಕೈಗೆ ಪ್ರಸಕ್ತ ಸಿಕ್ಕಿರುವುದು 'ವಜ್ರ'. ಹೊಸ ನಾಯಕ ಮತ್ತು ನಿರ್ದೇಶಕರು ಇರುವ ಚಿತ್ರವಾಗಿರುವ ಕಾರಣ ತನಗೆ ಹೆಚ್ಚು ಸ್ಕೋಪ್ ಇದೆ ಎಂದು ಕ್ಯಾಮರಾ ಮುಂದೆ ಹಲ್ಕಿರಿದು ಓಲಾಡಿದ್ದಾರೆ ಜೆನ್ನಿಫರ್.

ಅರ್ಜುನ್ ಸಿದ್ದು ಈ ಚಿತ್ರದ ನಿರ್ದೇಶಕರು. ಇವರಿಗಿದು ಮೊದಲನೆ ಚಿತ್ರ. ಚೆನ್ನೈನಲ್ಲಿ ನಿರ್ದೇಶನದ ಕೋರ್ಸ್ ಮುಗಿಸಿಕೊಂಡು ನೇರವಾಗಿ ಸ್ಯಾಂಡಲ್‌ವುಡ್‌ನಲ್ಲಿ 'ವಜ್ರ' ಹುಡುಕುತ್ತಿದ್ದಾರೆ. ಈ 'ವಜ್ರ'ದ ಹೊಳಪನ್ನು ಗಾಂಧಿನಗರದಲ್ಲಿ ಮಿಂಚಿಸುವ ಜವಾಬ್ದಾರಿ ರಿಯಲ್ ಎಸ್ಟೇಟ್ ಉದ್ಯಮಿ ನಿರ್ಮಾಪಕ ಸುಬ್ರಹ್ಮಣ್ಯಂ ಅವರದ್ದು. ಇವರಿಗೂ ಸಹ ಚಿತ್ರೋದ್ಯಮ ಹೊಸದು.

ಚಿತ್ರಕ್ಕೆ ಸೂಕ್ತ ನಾಯಕನ ಹುಡುಕಾಟ ನಡೆದಿದೆ. ಇದು ನಾಯಕಿ ಪ್ರಧಾನ ಚಿತ್ರ. ಹಾಗಂತ ನಾಯಕನ ನಟನೆಗೆ ಹೆಚ್ಚಿನ ಅವಕಾಶ ಇಲ್ಲಾಂತ ಅಲ್ಲ. ಎಲ್ಲಾ ಚಿತ್ರಗಳಂತೆ ಇಲ್ಲೂ ಪ್ರೀತಿ ಪ್ರೇಮ ಇದ್ದೇ ಇದೆ. ಆದರೆ, ಇಲ್ಲಿ ಹೇಳ ಹೊರಟಿರುವುದು ರಿಯಲ್ ಪ್ರೇಮಿಯ ಕಥೆ. ನಿರ್ದೇಶಕ ಗೆಳೆಯರೊಬ್ಬರ ರಿಯಲ್ ಲವ್ ಸ್ಟೋರಿಯೇ ಚಿತ್ರ ಕತೆಯೇ ಹೈಲೈಟ್.

ಬರೀ ಲವ್ ಸುತ್ತ ಸುತ್ತುವುದಿಲ್ಲ. ಜೊತೆಗೆ ಕಾಮೆಡಿ, ಸೆಂಟಿಮೆಂಟ್ ಹಾಗೂ ಅಲ್ಲಲ್ಲಿ ಆಕ್ಷನ್ ಕೂಡ ಇರುತ್ತದೆ ಎಂದಿದ್ದಾರೆ ಅರ್ಜುನ್ ಸಿದ್ದು. ಒಂದು ವಿಶೇಷವೆಂದರೆ, ಈ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ತಯಾರಿಸಲಾಗುತ್ತದೆ ಎನ್ನುವುದು.

ರೆಬೆಲ್ ಸ್ಟಾರ್ ಅಂಬರೀಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಸಾಧುಕೋಕಿಲ, ರಂಗಾಯಣ ರಘು, ಬಿರಾದಾರ್, ಬ್ಯಾಂಕ್ ಜನಾರ್ದನ್, ಸತ್ಯಜಿತ್ ಸೇರಿದಂತೆ ಇನ್ನೂ ಮುಂತಾದವರಿದ್ದಾರೆ.

ರವಿ ಸುವರ್ಣ ಅವರ ಛಾಯಾಗ್ರಹಣ, ವಿಕಾಸ್ ಸಂಗೀತ ಚಿತ್ರಕ್ಕಿದೆ. ಮೈಸೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಜನವರಿ ಅಂತ್ಯದಲ್ಲಿ ಚಿತ್ರದ ಮುಹೂರ್ತ ಅನ್ನುವ ಮಾತು ಆಡಿದ್ದಾರೆ ರಮೇಶ್.

Share this Story:

Follow Webdunia kannada