Select Your Language

Notifications

webdunia
webdunia
webdunia
webdunia

'ಸಾರಥಿ'ಯ ಬೃಂದಾವನ ಸೆಟ್‌ಗೆ 30 ಲಕ್ಷ!

'ಸಾರಥಿ'ಯ ಬೃಂದಾವನ ಸೆಟ್‌ಗೆ 30 ಲಕ್ಷ!
PR
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರದ ಗೀತೆಯೊಂದಕ್ಕೆ 30 ಲಕ್ಷ ಮೌಲ್ಯದ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ. ರಾಕ್‌ಲೈನ್ ಸ್ಟುಡಿಯೋದಲ್ಲಿರುವ ನಿರ್ಮಿಸಲಾಗಿರುವ ಈ ಬೃಂದಾವನದ ಸೃಷ್ಠಿಕರ್ತ ಕಲಾ ನಿರ್ದೇಶಕ ಈಶ್ವರಿ ಕುಮಾರ್.

ಇಂತಹ ಅದ್ದೂರಿ ಬೃಂದಾವನ ಸೆಟ್‌ನಲ್ಲೇ ನಾಯಕ ಮತ್ತು ನಾಯಕಿ ನರ್ತಿಸುವಂತೆ 'ಸಾರಥಿ'ಗೆ ಗೀತೆ ಬರೆದಿದ್ದಾರೆ ವಿ.ನಾಗೇಂದ್ರ ಪ್ರಸಾದ್.

ಹರ್ಷ ಅವರು ನೃತ್ಯ ಸಂಯೋಜಿಸಿದ ಈ ಗೀತೆಗೆ ನಾಯಕ ದರ್ಶನ್ ಹಾಗೂ ನಾಯಕಿ ದೀಪಾ ಸನ್ನಿಧಿ ಹೆಜ್ಜೆ ಹಾಕಿದ್ದಾರೆ. ಕೃಷ್ಣನ ಬೃಂದಾವನವನ್ನು ಹೋಲುವ ಸೆಟ್‌ನ ನಿರ್ಮಾಣಕ್ಕಾಗಿ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಿದೆ ಎಂದಿದ್ದಾರೆ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್.

ರಾಜ್‌ ಕಮಲ್ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸಾರಥಿ' ಚಿತ್ರಕ್ಕೆ ಈ ವರೆಗೂ 95 ದಿನಗಳ ಚಿತ್ರೀಕರಣ ನಡೆದಿದೆ.

ದಿನಕರ ತೂಗುದೀಪ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಚಿಂತನ್ ಸಂಭಾಷಣೆ, ವಿ.ಹರಿಕೃಷ್ಣರ ಸಂಗೀತವಿದೆ.

ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ-ಪಳನಿರಾಜ್ ಸಾಹಸ ಹಾಗೂ ಮದನ್ ಹರಿಣಿ-ಹರ್ಷ ಅವರ ನೃತ್ಯ ನಿರ್ದೇಶನವಿದೆ.

ಚಿತ್ರದ ತಾರಾ ಬಳಗದಲ್ಲಿ ರಂಗಾಯಣ ರಘು, ಲೋಹಿತಾಶ್ವ, ಅಜಯ್, ಬುಲೆಟ್ ಪ್ರಕಾಶ್, ಸೀತಾ, ಶರತ್‌ ಕುಮಾರ್, ವಿಶ್ವ, ಮುನಿ, ಕೋಟೆ ಪ್ರಭಾಕರ್ ಮುಂತಾದವರಿದ್ದಾರೆ.

Share this Story:

Follow Webdunia kannada