ಶ್ರುತಿ ಸಂಜೆ ತಿಂದ ಆಹಾರದಲ್ಲಿ ಅದೇನು ಬೆರೆತಿತ್ತೊ, ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರು. ಮಾಧ್ಯಮಗಳಿಗೆ ಈ ಸುದ್ದಿ ಸಿಕ್ಕಿದ್ದೇ ತಡ ರೆಕ್ಕೆ ಪುಕ್ಕ ಸೇರಿ ಶ್ರುತಿ ಆತ್ಮಹತ್ಯೆಗೆ ಪ್ರಯತ್ನ ಎಂಬ ಹೆಡ್ಲೈನ್ಗಳು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಪ್ರಕಟಗೊಂಡವು.
ರಾತ್ರಿ ವೇಳೆ ಮಾಧ್ಯಮದವರನ್ನು ಸಂಪರ್ಕಿಸಿ ಸ್ಪಷ್ಟನೆ ಕೊಡಲು ಅವರಿಗೂ ಸಾಧ್ಯವಾಗಲಿಲ್ಲ. ಇತ್ತ ಮಾಧ್ಯಮದವರಿಗೂ ಯಾವತ್ತೂ ಒಂದೇ ಕರೆಗೆ ಮಾತಿಗೆ ಸಿಗುವ ಶ್ರುತಿ ಇಂದು ಯಾಕೆ ರಿಸೀವ್ ಮಾಡುತ್ತಿಲ್ಲ ಎಂಬ ಸಂಶಯ. ಸರಿ ಎಲ್ಲೋ ಎನೋ ಎಡವಟ್ಟಾಗಿದೆ ಎಂಬ ನಿರ್ಧಾರ ಆಗಲೇ ಸಿಕ್ಕಿತ್ತು.
ಮರುದಿನ ಆಕೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಲೇ ಸುದ್ದಿಗೋಷ್ಠಿ ನಡೆಸಿ ನನಗಾಗಿದ್ದು ಫುಡ್ ಪಾಯಿಸನ್ ಅಷ್ಟೇ. ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂಬ ಸುದ್ದಿ ಸುಳ್ಳು. ರಾತ್ರಿಯೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದುಕೊಂಡರೂ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಈ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ನಾನಲ್ಲ. ಮದುವೆ-ಡೈವೋರ್ಸ್ ವಿವಾದಗಳಿಂದ ನೊಂದಿರುವುದು ನಿಜ, ಹಾಗೆಂದು ಆತ್ಮಹತ್ಯೆಯಂತಹ ಹೀನ ಕೆಲಸಕ್ಕೆ ಕೈಹಾಕುವುದಿಲ್ಲ. ಈಗ ನಾನು ಸಂಪೂರ್ಣ ಗುಣಗೊಂಡಿದ್ದೇನೆ. ನನ್ನೊಂದಿಗೆ ಸಹಕರಿಸಿದ ಎಲ್ಲಾ ಮಾಧ್ಯಮದವರಿಗೂ ಧನ್ಯವಾದಗಳು ಎಂದು ಹೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.