ವಿಷ್ಣು, ಬೆಂಗಳೂರನ್ನು ಮರೆಯಲ್ಲ: ಅಕ್ಷಯ್ ಕುಮಾರ್
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಪಾಲಿಗೆ ಬೆಂಗಳೂರು ಬರೀ ಉದ್ಯಾನ ನಗರಿಯಲ್ಲ. ಇಲ್ಲಿ ಅವರಿಗೆ ಮರೆಯಲಾಗದ ಅನುಭವಗಳಿವೆ. ತನ್ನ ಚೊಚ್ಚಲ ಚಿತ್ರದ ಮೊದಲ ದೃಶ್ಯವೇ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡದ್ದು ಮೊದಲನೆಯದ್ದಾದರೆ, ಎರಡನೆಯದ್ದು ಸಾಹಸಸಿಂಹ ವಿಷ್ಣುವರ್ಧನ್ ಜತೆಗೆ ಅಭಿನಯಿಸಿದ್ದು. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದವರು ಇದನ್ನೆಲ್ಲ ನೆನಪಿಸಿಕೊಂಡಿದ್ದಾರೆ. ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಚಿತ್ರಾಂಗದಾ ಸಿಂಗ್ ಜತೆಗಿನ 'ದೇಸಿ ಬಾಯ್ಸ್' ಚಿತ್ರದ ಪ್ರಚಾರಕ್ಕಾಗಿ ಅವರು ಬಂದಿದ್ದರು. ಅವರು ಹೇಳಿದ್ದಿಷ್ಟು:ಬೆಂಗಳೂರನ್ನು ಮರೆಯಲಾಗದು....ರಾಜ್ ಸಿಪ್ಪಿ ನಿರ್ದೇಶನದ ನನ್ನ ಚೊಚ್ಚಲ ಚಿತ್ರ 'ಸೌಗಂಧ್'ನ ಮೊದಲ ದೃಶ್ಯ ಚಿತ್ರೀಕರಣವಾಗಿದ್ದೇ ಬೆಂಗಳೂರಿನಲ್ಲಿ. ಹಾಗಾಗಿ ಈ ನಗರ ಯಾವತ್ತೂ ನನ್ನ ಹೃದಯದಲ್ಲೇ ಸ್ಥಾನ ಪಡೆದುಕೊಂಡಿರುತ್ತದೆ. ಯಾವತ್ತೂ ಮರೆಯಲು ಸಾಧ್ಯವಿಲ್ಲ.ವಿಷ್ಣುಜೀ ನೆನಪು ಹಚ್ಚಹಸುರು...ಕನ್ನಡದ 'ವಿಷ್ಣು ವಿಜಯ' ಚಿತ್ರದಲ್ಲಿ ವಿಷ್ಣುವರ್ಧನ್ ಜತೆ ನಾನು ಅಭಿನಯಿಸಿದ್ದೆ. ಇದೇ ಚಿತ್ರ ಹಿಂದಿಯಲ್ಲಿ 'ಅಶಾಂತ್' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಅಶ್ವಿನಿ ಭಾವೆ ಮತ್ತು ಮಮತಾ ಕುಲಕರ್ಣಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು. ಅದನ್ನೂ ಮರೆಯಲಾರೆ.ತಮಿಳಿನಲ್ಲಿ ನಟಿಸುವಾಸೆ...ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವ ಕುರಿತು ಹೇಳುವುದಾದರೆ, ಕನ್ನಡದಲ್ಲಿ ಈಗಾಗಲೇ ನಟಿಸಿದ್ದೇನೆ. ಈಗ ತಮಿಳಿನಲ್ಲಿ ನಟಿಸುವ ಆಸೆಯಿದೆ. ಯಾರಾದರೂ ಅತ್ಯುತ್ತಮ ಚಿತ್ರಕತೆಯೊಂದಿಗೆ ಬಂದರೆ ನಾನಂತೂ ಸಿದ್ಧನಿದ್ದೇನೆ.ಟ್ವಿಂಕಲ್ ಜತೆ ಮತ್ತೆ ನಟನೆ...ನೋ... ಪತ್ನಿ ಟ್ವಿಂಕಲ್ ಖನ್ನಾ ಜತೆ ಮತ್ತೆ ನಟಿಸುವ ಸಾಧ್ಯತೆಗಳು ಕಡಿಮೆ. ಆಕೆಗೆ ಸಿನಿಮಾಗಳಲ್ಲೀಗ ಆಸಕ್ತಿಯಿಲ್ಲ.ವೆಬ್ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!