Webdunia - Bharat's app for daily news and videos

Install App

ರಾಜೀನಾಮೆ ವಾಪಸ್ ಪಡೆದ ಅಂಬರೀಷ್!

Webdunia
MOKSHA
ಕಲಾವಿರದಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂಬ ಕಾರಣದಿಂದ ಬೇಸತ್ತು ಕಲಾವಿದರ ಸಂಘಕ್ಕೆ ರಾಜೀನಾಮೆ ನೀಡಿದ್ದ ಅಂಬರೀಷ್ ಇದೀಗ ಕಲಾವಿದರ ಒತ್ತಡಕ್ಕೆ ಮಣಿದು ರಾಜೀನಾಮೆ ಹಿಂಪಡೆದಿದ್ದಾರೆ. ಬಿ.ಸರೋಜಾದೇವಿ, ದರ್ಶನ್, ರಾಘವೇಂದ್ರ ರಾಜ್‌ಕುಮಾರ್, ಉಪೇಂದ್ರ, ಸುದೀಪ್, ತಾರಾ, ಪೂಜಾ ಗಾಂಧಿ, ಐಂದ್ರಿತಾ ರೇ, ಸುಧಾರಣಿ ಮತ್ತಿತರರು ಅಂಬರೀಷ್ ನಿವಾಸಕ್ಕೆ ತೆರಳಿ ಅವರ ಮನವೊಲಿಸುವ ಪ್ರಯತ್ನ ಮಾಡಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಮೊದಮೊದಲ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪದ ಅಂಬರೀಷ್ ನಂತರ ಎಲ್ಲರ ಒತ್ತಾಯಕ್ಕೆ ಷರತ್ತುಗಳ್ು ಹಾಕಿಯೇ ರಾಜೀನಾಮೆ ಹಿಂಪಡೆಯಲು ಒಪ್ಪಿಗೆ ಸೂಚಿಸಿದರು.

ಎಲ್ಲರೂ ಒಟ್ಟಿಗಿದ್ದೇ ಕೆಲಸ ಮಾಡೋಣ. ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಂತೆ. ನಾವೆಲ್ಲಾ ಸೇರಿಯೇ ಕಲಾವಿದರ ಸಂಘ ಕಟ್ಟೋಣ. ರಾಜಣ್ಣರ ಕನಸಿನಂತೆ, ಕನ್ನಡ ಚಿತ್ರರಂಗದ ಒಗ್ಗಟ್ಟನ್ನು ಪ್ರದರ್ಶಿಸೋಣ. ಶೀಘ್ರದಲ್ಲೇ ಇನ್ನೆರಡು ಸಭೆ ಕರೆಯುತ್ತೇನೆ. ಅದಕ್ಕೂ ಕಲಾವಿದರು ಮತ್ತೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿ ಬರದೇ ಇದ್ದರೆ ನಾನು ಖಂಡಿತವಾಗಿಯೂ ಅಧ್ಯಕ್ಷನ ಕುರ್ಚಿಯಿಂದ ಹಿಂದೆ ಸರಿಯುತ್ತೇನೆ. ನಾನೊಬ್ೇ ಅಂತ ಎಷ್ಟು ಒದ್ದಾಡಲಿ ಹೇಳಿ. ಎಲ್ಲ ಕಲಾವಿದರಿಗೂ ಇದು ಲಾಸ್ಟ್ ಚಾನ್ಸ್ ಎಂದು ಅಂಬಿ ಕಲಾವಿದರೆಲ್ಲರಿಗೂ ಚುರುಕು ಸಂದೇಶ ರವಾನಿಸಿದ್ದಾರೆ.

ಅಂಬರೀಷ್ ಅವರ ರಾಜೀನಾಮೆ ಬಿಸಿ ಬಹುತೇಕ ಎಲ್ಲ ಕಲಾವಿದರಿಗೂ ತಟ್ಟಿದೆ. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಹಿರಿಕಿರಿಯ ಕಲಾವಿದರೆಲ್ಲರೂ ಅಂಬಿ ಮನೆಗೆ ತೆರಳಿದ್ದೇ ಸಾಕ್ಷಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments