Webdunia - Bharat's app for daily news and videos

Install App

ರಮ್ಯಾ ಕೋಳಿ-ಮೀನು ತಿನ್ನೋದನ್ನು ಬಿಟ್ರಂತೆ!

Webdunia
SUJENDRA
ಸೆಲೆಬ್ರಿಟಿಗಳು ಕುಂತರೂ ಸುದ್ದಿ, ನಿಂತರೂ ಸುದ್ದಿ. ಲಕ್ಕಿ ಸ್ಟಾರ್ ರಮ್ಯಾರಂತೂ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಚಾಲ್ತಿಯಲ್ಲಿರುವವರು. ಈಗ ಅವರು ಮಾಂಸಾಹಾರ ಬಿಟ್ಟಿದ್ದಾರಂತೆ. ಅದೂ ಮೀನು ಸಾಯುವಾಗ ಏನೆಲ್ಲ ಕಷ್ಟವನ್ನು ಅನುಭವಿಸುತ್ತದೆ ಅನ್ನೋದನ್ನು ಟಿವಿಯಲ್ಲಿ ನೋಡಿ ಮರುಗಿದ ನಂತರ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಾಂಸಾಹಾರ ತ್ಯಜಿಸುವ ಸೆಲೆಬ್ರಿಟಿಗಳಿಗೆ ಏನೂ ಕೊರತೆಯಿಲ್ಲ. ಕೆಲವರು ಪ್ರಾಣಿ ದಯಾ ಸಂಘಟನೆ ಪೆಟಾದ ಒತ್ತಾಯಕ್ಕೆ ಮಣಿದು ಮಾಂಸಾಹಾರ ಬಿಟ್ಟವರು ಕೆಲವು ತಿಂಗಳುಗಳ ನಂತರ ಸದ್ದಿಲ್ಲದೆ ಮತ್ತೆ ಶುರುವಿಟ್ಟುಕೊಂಡ ಉದಾಹರಣೆಗಳೂ ಇವೆ. ಆದರೆ ನಮ್ಮ ರಮ್ಯಾ ಬದಲಾಗಲು ಕಾರಣ, ಯಾವುದೇ ಪ್ರಾಣಿ ದಯಾ ಸಂಘಟನೆಯಲ್ಲ. ಬದಲಿಗೆ ಅವರಲ್ಲೇ ಹುಟ್ಟಿರುವ ವೇದನೆಗಳು.

ಆಗಿದ್ದಿಷ್ಟೇ. ಟಿವಿಯಲ್ಲಿ ಮೀನಿನ ಪರಿಪಾಟಲಿನ ಕುರಿತು ಕಾರ್ಯಕ್ರಮವೊಂದನ್ನು ನೋಡಿದ್ದರು. ನೀರಿನಿಂದ ಹೊರಗೆ ತೆಗೆದ ಸಂದರ್ಭದಲ್ಲಿ ಮೀನಿಗೆ ಉಸಿರುಗಟ್ಟುವುದನ್ನು ಮತ್ತು ಅದು ಸಾಯುವುದನ್ನು ಅದರಲ್ಲಿ ವಿವರವಾಗಿ ವೈಜ್ಞಾನಿಕವಾಗಿ ತೋರಿಸಲಾಗಿತ್ತು. ರಮ್ಯಾ ಬದಲಾವಣೆಗೆ ಇಷ್ಟೇ ಸಾಕಾಯಿತು. ಇನ್ನೆಂದೂ ಮಾಂಸಾಹಾರ ಮುಟ್ಟೋದಿಲ್ಲ ಎಂದಿದ್ದಾರೆ.

ಒಂದು ಮೀನು ಹೀಗೆ ನಮ್ಮ ಸ್ವಾರ್ಥಕ್ಕಾಗಿ ವಿಲವಿಲನೆ ಒದ್ದಾಡಿ ಪ್ರಾಣ ಬಿಡುತ್ತದೆ. ಇತರ ಪ್ರಾಣಿಗಳೂ ಇದೇ ರೀತಿ ಸಾಯುತ್ತವೆ. ಇಂತಹ ಕ್ರೂರ ಸಾವನ್ನು ನನ್ನಿಂದ ಸಹಿಸಲಾಗುತ್ತಿಲ್ಲ. ಹಾಗಾಗಿ ಈಗಿಂದೀಗಲೇ ನಾನು ಮಾಂಸಾಹಾರ ತ್ಯಜಿಸುತ್ತೇನೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ.

ಅಂದ ಹಾಗೆ ರಮ್ಯಾ ತ್ಯಜಿಸಿರುವುದು ಮಾಂಸಾಹಾರ ಮಾತ್ರವಲ್ಲ, ಶಾಂಪೇನ್ ಕುಡಿಯೋದನ್ನೂ ನಿಲ್ಲಿಸಲು ನಿರ್ಧರಿಸಿದ್ದಾರೆ. ಇದಕ್ಕೇನು ಕಾರಣ ಅನ್ನೋದನ್ನು ಮಾತ್ರ ಅವರು ವಿವರಿಸಿಲ್ಲ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments