Webdunia - Bharat's app for daily news and videos

Install App

ರಮ್ಯಾ ಅರೆನಗ್ನ ಚಿತ್ರ: ಸಿನಿ ಫೋಟೊಗ್ರಾಫರ್‌ಗಳು ಟಾರ್ಗೆಟ್..!

Webdunia
PR
ಜಂಭದ ಕೋಳಿ ಎಂದೇ ಅಡ್ಡ ಹೆಸರಿನಿಂದ ಕರೆಯಲ್ಪಡುವ ಲಕ್ಕಿ ಸ್ಟಾರ್ ರಮ್ಯಾ ಇನ್ನೊಂದು ಸುತ್ತಿನ ರಗಳೆ ಆರಂಭಿಸಿದ್ದಾರೆ. ಈ ಬಾರಿ ಅವರು ಬಲಿಪಶುವನ್ನಾಗಿ ಆಯ್ಕೆ ಮಾಡಿರುವುದು ಸಿನಿಮಾ ಫೋಟೊಗ್ರಾಫರುಗಳನ್ನು. ತಪ್ಪು ಮಾಡಿದ್ದರೆ ಎಚ್ಚರಿಕೆ ನೀಡಿ ಬಿಡುವ ಬದಲು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ!

ಆಗಿರುವುದು ಇಷ್ಟೇ, ವಿಜಯ್ ಕುಮಾರ್ ನಿರ್ದೇಶನದ 'ನೀರ್ ದೋಸೆ' ಚಿತ್ರದ ಚಿತ್ರೀಕರಣದ ಸೆಟ್‌ಗೆ ಕೆ.ಎನ್. ನಾಗೇಶ್ ಕುಮಾರ್ ಮತ್ತು ಮನು ಸೇರಿದಂತೆ ಕೆಲವು ಸಿನಿಮಾ ಫೋಟೊಗ್ರಾಫರುಗಳು ಹೋಗಿದ್ದರು. ಸಾಮಾನ್ಯವಾಗಿ ಸಿನಿಮಾ ಫೋಟೋಗ್ರಾಫರುಗಳು ಆಹ್ವಾನ ಇಲ್ಲದೆಯೂ ಸೆಟ್‌ಗೆ ಹೋಗುವುದರಿಂದ ಎಂದಿನಂತೆ ತೆರಳಿದ್ದರು. ಆ ದಿನ ಸ್ವತಃ ನಿರ್ದೇಶಕರೇ ಫೋಟೊ ತೆಗೆಯಲು ಅನುಮತಿಯನ್ನೂ ನೀಡಿದ್ದರು.

ಅದರಂತೆ ಶೂಟಿಂಗ್ ಸಂದರ್ಭದ ಹಲವು ಫೋಟೊಗಳನ್ನು ತೆಗೆಯಲಾಗಿತ್ತು. ಅದರಲ್ಲಿ ಒಂದು ರಮ್ಯಾ ಕ್ಲಬ್ ಡ್ಯಾನ್ಸರ್ ವೇಷಧಾರಿಯಾಗಿ ಕುಳಿತಿದ್ದ ಫೋಟೊವೂ ಸೇರಿತ್ತು. ಈ ಚಿತ್ರ ತೆಗೆಯುವ ಮೊದಲು ಫೋಟೋಗ್ರಾಫರ್ ತನ್ನ ಅನುಮತಿ ಕೇಳಿಲ್ಲ ಅನ್ನೋದು ರಮ್ಯಾ ಕಿರಿಕ್. ಫೋಟೊಗಳನ್ನು ಬಹಿರಂಗಪಡಿಸಬಾರದು ಎಂದು ಈ ಸಂದರ್ಭ ಷರತ್ತು ವಿಧಿಸಿದ್ದೆ ಅನ್ನೋದು ರಮ್ಯಾ ವಾದ.

ಇತ್ತ ರಮ್ಯಾ ಅರೆನಗ್ನರಾಗಿದ್ದ ಚಿತ್ರವನ್ನು ಫೋಟೋಗ್ರಾಫರ್ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿದ್ದರು. ಅಲ್ಲಿ ಆ ಫೋಟೊ ನೋಡಿದ ಕೆಲವರು ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಹಂಚಿಕೊಂಡಿದ್ದರು. ಈ ನಡುವೆ ಫೋಟೋಗ್ರಾಫರ್ ಈ ಫೋಟೊಗಳನ್ನು ಕೆಲವು ಪತ್ರಿಕೆಗಳಿಗೂ ನೀಡಿದ್ದರು. ಇದಕ್ಕೆ ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಿಗೆ ವೆಬ್‌ಸೈಟ್‌ನಿಂದ ಫೋಟೊ ತೆಗೆಯಲಾಯಿತು. ಪತ್ರಿಕೆಗಳಿಗೂ ಫೋಟೊ ಪ್ರಕಟಿಸದಂತೆ ಮನವಿ ಮಾಡಲಾಯಿತು.

ಇಷ್ಟಾದ ಮೇಲೂ ರಮ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಫೋಟೋಗ್ರಾಫರುಗಳಾದ ಕೆ.ಎನ್. ನಾಗೇಶ್ ಕುಮಾರ್ ಮತ್ತು ಮನು ವಿರುದ್ಧ ಪ್ರಕರಣ ದಾಖಲಾಗಿದೆ.

ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ನಟಿಯರ ಇಲ್ಲ ಸಲ್ಲದ ಭಂಗಿಯ ಫೋಟೊ ತೆಗೆಯುವ ಛಾಯಾಗ್ರಾಹಕರಿಗೆ ಬುದ್ಧಿ ಕಲಿಸುತ್ತೇನೆ ಎಂದು ರಮ್ಯಾ ಹೂಂಕರಿಸಿದ್ದಾರೆ. ಇದಕ್ಕೆ ಕೆಲವು ನಟೀಮಣಿಯರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವು ಬಾರಿ ಸಿನಿಮಾಗಳ ಪತ್ರಿಕಾಗೋಷ್ಠಿಯಲ್ಲಿ ನಟಿಯರು ತುಂಡುಡುಗೆಗಳನ್ನು ಹಾಕಿ ಕುಳಿತ ಸಂದರ್ಭ ಕಾದು ಕುಳಿತವರಂತೆ ಕೆಲವರ ಕ್ಯಾಮರಾ ಕಣ್ಣುಗಳು ಎಲ್ಲೆಲ್ಲೋ ಹರಿದಾಡುತ್ತವೆ. ಮರುದಿನ ಆ ಚಿತ್ರಗಳು ಪತ್ರಿಕೆಗಳಲ್ಲೋ, ವೆಬ್‌ಸೈಟ್‌ಗಳಲ್ಲೋ ರಾರಾಜಿಸುತ್ತಿರುತ್ತದೆ. ಇದು ವೃತ್ತಿಧರ್ಮವಲ್ಲ ಎನ್ನುವುದು ಈ ನಟಿಯರ ಆರೋಪ.

ಇಲ್ಲಿ ಇನ್ನೊಂದು ಪ್ರಶ್ನೆಗೆ ಉತ್ತರ ಸಿಕ್ಕಿಯೇ ಇಲ್ಲ. ಅದು ರಮ್ಯಾ ಚಿತ್ರೀಕರಣಕ್ಕೆ ಸಿದ್ಧರಾಗಿ ಕುಳಿತಾಗಿನ ಫೋಟೊ. ಚಿತ್ರೀಕರಣ ಮಾಡಬಹುದು, ಆ ಧಿರಿಸಿನಲ್ಲಿ ಪ್ರೇಕ್ಷಕರ ಮುಂದೆ ಹೋಗಬಹುದು ಎಂದಾದರೆ, ಆ ಚಿತ್ರಗಳನ್ನು ಬಹಿರಂಗ ಮಾಡಿದರೆ ಅದರಲ್ಲಿ ರಮ್ಯಾ ಮಾನ ಹೋಗುವ ಪ್ರಶ್ನೆ ಎಲ್ಲಿದೆ? ಯಾಕೆಂದರೆ, ರಮ್ಯಾ ಈಗ ಮಾನಹಾನಿಯಾಗಿದೆ ಎಂದು ದೂರು ನೀಡಿದ್ದಾರಂತೆ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments