Webdunia - Bharat's app for daily news and videos

Install App

ರಜನಿಕಾಂತ್ ಹೊಸ ಚಿತ್ರಕ್ಕೆ ಕಿಚ್ಚ ಸುದೀಪ್ ಆಯ್ಕೆ ?

Webdunia
ಮಂಗಳವಾರ, 11 ಮಾರ್ಚ್ 2014 (12:52 IST)
PR
ರಜನಿಕಾಂತ್ ಅವರ ಮುಂದಿನ ಚಿತ್ರವನ್ನು ಕೆ.ಎಸ್. ರವಿ ಕುಮಾರ್ ಅವರು ನಿರ್ದೇಶಿಸುತ್ತಾರೆ ಎನ್ನುವ ಸಂಗತಿ ಬಗ್ಗೆ ನಾವು ಈ ಮೊದಲು ತಿಳಿಸಿದ್ದೆವು. ಆ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ರಜನಿ ಅವರು ತಮ್ಮ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಕನ್ನಡ ನಟರೋಬ್ಬರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಅವರು ಬೇರೆ ಯಾರು ಅಲ್ಲ ಬಹು ಭಾಷೆಗಳ ಚಿತ್ರಗಳಲ್ಲಿ ತಮ್ಮ ಪ್ರತಿಭೆ ತೋರಿ ಸ್ಥಾನ ಪಡೆದಿರುವ ಕಿಚ್ಚ ಸುದೀಪ್. ಈ ಬಗ್ಗೆ ಸುದೀಪ್ ಅವರಿಂದ ಯಾವುದೇ ಬಗೆಯ ಮಾಹಿತಿ ಇರದೇ ಇದ್ದರು ಸಹ ಚೆನ್ನೈ ಮೂಲಗಳು ಈ ಸಂಗತಿಯನ್ನು ಸ್ಪಷ್ಟ ಪಡಿಸಿದೆ.

ರಜನಿಕಾಂತ್ ಈಗ ಚಿತ್ರವನ್ನು ವೀಕ್ಷಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಬಹು ನಿರೀಕ್ಷಿತ ಮತ್ತೊಂದು ಚಿತ್ರಕ್ಕೆ ಸುದೀಪ್ ಸೂಕ್ತ ವಿಲನ್ ಎಂದು ನಿರ್ಧರಿಸಿದ್ದಾರೆ . ಸುದೀಪ್ ಗೆ ಅವಕಾಶ ನೀಡಿದ್ದಾರೆ ಎಂದಿದ್ದಾರೆ ಕಾಲಿವುಡ್ ಮಂದಿ! ಈಗ ಬಿಂದಾಸ್ ಚಂದ್ರಶೇಖರ್ ಪ್ರೊಡಕ್ಷನ್ ಚಿತ್ರ ಮತ್ತು ಕೆ.ಎಸ್ . ರವಿ ಕುಮಾರ್ ನಿರ್ದೇಶನದ ಸೂರಪ್ಪ ಬಾಬು ಅವರ ನಿರ್ಮಾಣದ ಚಿತ್ರದಲ್ಲಿ ನಟಿಸಲು ಕಿಚ್ಚ ಕಡೆಯಿಂದ ಸಮ್ಮತಿ ದೊರಕಿದೆ .. ಈಗ ರಾಕ್ ಲೈನ್ ಚಿತ್ರದಲ್ಲೂ ಸಹ ತಮ್ಮ ಪ್ರತಿಭೆ ತೋರಲು ಸಿದ್ಧ ಆಗುತ್ತಿದ್ದಾರೆ. ಕಿಚ್ಚ ಸುದೀಪ್ ಅವರ ಈ ಯಶಸ್ಸಿಗೆ ನಮ್ಮ ಕಡೆಯಿಂದಲೂ ಗುಡ್ಲಕ್

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments