Select Your Language

Notifications

webdunia
webdunia
webdunia
webdunia

ರಜನಿಕಾಂತ್ ಹೊಸ ಚಿತ್ರಕ್ಕೆ ಕಿಚ್ಚ ಸುದೀಪ್ ಆಯ್ಕೆ ?

ರಜನಿಕಾಂತ್ ಹೊಸ ಚಿತ್ರಕ್ಕೆ ಕಿಚ್ಚ ಸುದೀಪ್ ಆಯ್ಕೆ ?
, ಮಂಗಳವಾರ, 11 ಮಾರ್ಚ್ 2014 (12:52 IST)
PR
ರಜನಿಕಾಂತ್ ಅವರ ಮುಂದಿನ ಚಿತ್ರವನ್ನು ಕೆ.ಎಸ್. ರವಿ ಕುಮಾರ್ ಅವರು ನಿರ್ದೇಶಿಸುತ್ತಾರೆ ಎನ್ನುವ ಸಂಗತಿ ಬಗ್ಗೆ ನಾವು ಈ ಮೊದಲು ತಿಳಿಸಿದ್ದೆವು. ಆ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ರಜನಿ ಅವರು ತಮ್ಮ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಕನ್ನಡ ನಟರೋಬ್ಬರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಅವರು ಬೇರೆ ಯಾರು ಅಲ್ಲ ಬಹು ಭಾಷೆಗಳ ಚಿತ್ರಗಳಲ್ಲಿ ತಮ್ಮ ಪ್ರತಿಭೆ ತೋರಿ ಸ್ಥಾನ ಪಡೆದಿರುವ ಕಿಚ್ಚ ಸುದೀಪ್. ಈ ಬಗ್ಗೆ ಸುದೀಪ್ ಅವರಿಂದ ಯಾವುದೇ ಬಗೆಯ ಮಾಹಿತಿ ಇರದೇ ಇದ್ದರು ಸಹ ಚೆನ್ನೈ ಮೂಲಗಳು ಈ ಸಂಗತಿಯನ್ನು ಸ್ಪಷ್ಟ ಪಡಿಸಿದೆ.

ರಜನಿಕಾಂತ್ ಈಗ ಚಿತ್ರವನ್ನು ವೀಕ್ಷಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಬಹು ನಿರೀಕ್ಷಿತ ಮತ್ತೊಂದು ಚಿತ್ರಕ್ಕೆ ಸುದೀಪ್ ಸೂಕ್ತ ವಿಲನ್ ಎಂದು ನಿರ್ಧರಿಸಿದ್ದಾರೆ . ಸುದೀಪ್ ಗೆ ಅವಕಾಶ ನೀಡಿದ್ದಾರೆ ಎಂದಿದ್ದಾರೆ ಕಾಲಿವುಡ್ ಮಂದಿ! ಈಗ ಬಿಂದಾಸ್ ಚಂದ್ರಶೇಖರ್ ಪ್ರೊಡಕ್ಷನ್ ಚಿತ್ರ ಮತ್ತು ಕೆ.ಎಸ್ . ರವಿ ಕುಮಾರ್ ನಿರ್ದೇಶನದ ಸೂರಪ್ಪ ಬಾಬು ಅವರ ನಿರ್ಮಾಣದ ಚಿತ್ರದಲ್ಲಿ ನಟಿಸಲು ಕಿಚ್ಚ ಕಡೆಯಿಂದ ಸಮ್ಮತಿ ದೊರಕಿದೆ .. ಈಗ ರಾಕ್ ಲೈನ್ ಚಿತ್ರದಲ್ಲೂ ಸಹ ತಮ್ಮ ಪ್ರತಿಭೆ ತೋರಲು ಸಿದ್ಧ ಆಗುತ್ತಿದ್ದಾರೆ. ಕಿಚ್ಚ ಸುದೀಪ್ ಅವರ ಈ ಯಶಸ್ಸಿಗೆ ನಮ್ಮ ಕಡೆಯಿಂದಲೂ ಗುಡ್ಲಕ್

Share this Story:

Follow Webdunia kannada