ಮುಸುರಿ ಕೃಷ್ಣ ಮೂರ್ತಿ ವೆಬ್ ಸೈಟ್ ಲೋಕಾರ್ಪಣೆ
ಬೆಂಗಳೂರು , ಭಾನುವಾರ, 17 ನವೆಂಬರ್ 2013 (12:25 IST)
ಕನ್ನಡ ಚಿತ್ರರಂಗ ಅನೇಕ ಪ್ರತಿಭಾವಂತರನ್ನು ಕಂಡಿದೆ ಅದರಲ್ಲಿ ದಿವಂಗತ ಮುಸುರಿ ಕೃಷ್ಣ ಮೂರ್ತಿ ಸಹ ಒಬ್ಬರು. ಅವರು ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲ , ಬರಹಗಳಿಂದಲೂ ಪ್ರಸಿದ್ಧರಾಗಿದ್ದರು. ಕಲಾವಿದರು ಸತ್ತರೂ ಬದುಕೇ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತೇ . ಅದೇ ರೀತಿ ಮುಸುರಿ ಮತ್ತೇ ಬದುಕಿ ಬಂದಿದ್ದಾರೆ ಇಂಟರ್ ನೆಟ್ ಮೂಲಕ. ಅವರ ವೆಬ್ ಸೈಟ್ ಇತ್ತೀಚೆಗೆ ಬಿಡುಗಡೆ ಆಯಿತು. ಮಕ್ಕಳಾದ ಜಯಸಿಂಹ ಮತ್ತು ಗುರುದತ್ ಮುಸುರಿ ಅವರು ತಮ್ಮ ತಂದೆಗೆ ಮತ್ತೇ ಜೀವ ನೀಡಿದರು.ಈ ರೀತಿ ಮಾಡುವುದಕ್ಕೆ ಮುಖ್ಯ ಕಾರಣ ಕೆ. ಎಂ. ವೀರೇಶ್. ಕನೆಕ್ಷನ್ ಕಾಳಪ್ಪ ಮೂಲಕ ವೆಬ್ ಪ್ರಪಂಚಕ್ಕೆ ಕಾಲಿಟ್ಟರು ಮುಸುರಿ.ಅದರಲ್ಲಿ ಮುಸುರಿ ಅವರ ಹಾಸ್ಯ ಸನ್ನಿವೇಶಗಳ ಸಂಗಮ ಇದೆ. ಇದನ್ನು ಕರ್ನಾಟಕ ಫಿಲಂ ಛೇಂಬರ್ ಅಧ್ಯಕ್ಷರಾದ ಎಚ್.ಡಿ.ಗಂಗರಾಜು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾ.ರಾ. ನಿರ್ಮಾಪಕ ಗೋವಿಂದು , ಕೆ.ಸಿ ಎನ್ ಚಂದ್ರ ಶೇಖರ್ ಸೇರಿದಂತೆ ಸಿನಿ ಗಣ್ಯರು ಭಾಗವಹಿಸಿದ್ದರು.ಬದುಕಿರುವ ತಾಯಿ ತಂದೆ ಯನ್ನು ಮರೆಯುವ ಈ ಕಾಲದಲ್ಲಿ ತಮ್ಮ ತಂದೆ ನೆನಪು ಶಾಶ್ವತವಾಗಿರಲು ಮುಸುರಿ ಮಕ್ಕಳು ಮಾಡಿರುವ ಈ ಅಮೋಘ ಕೆಲಸವನ್ನು ಸಾ.ರಾಗೋವಿಂದು ಶ್ಲಾಘಿಸಿದರು.ಕನ್ನಡದ ವರನಟ ಮುಸುರಿ ಎಂದು ಹೇಳಿದ್ದು ಕೆ.ಸಿಎನ್. ಚಂದ್ರಶೇಖರ್. ವೆಬ್ ಸೈಟ್ ನಲ್ಲಿ ಮುಸುರಿ ಕೃಷ್ಣಮೂರ್ತಿ ಅವರ ಬಗ್ಗೆ ಮತ್ತು ಚುರುಕಾದ ಅವರ ಡೈಲಾಗ್ ಗಳಿರುಯತ್ತವೆ. ಅದನ್ನು ಓದುತ್ತಾ-ಕೇಳುತ್ತಾ ಎಂಜಾಯ್ ಮಾಡುತ್ತಾ ಆ ಹಿರಿಯ ಜೀವಕ್ಕೆ ನಮನ ಸಲ್ಲಿಸೋಣ.