ಬೆಂಗಳೂರು: ನೀರ್ ದೋಸೆ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಅಧ್ಯಕ್ಷ ಗಂಗರಾಜು ನೇತೃತ್ವದಲ್ಲಿ ಸಂಧಾನ ಸಭೆಯನ್ನು ಇಂದು ನಡೆಸಲಾಯಿತು. ನಿರ್ಮಾಪಕ ಸುದೀಂಧ್ರ ಫಿಲಂ ಚೇಂಬರ್ಗೆ ದೂರು ನೀಡಿದ್ದರಿಂದ ಸಂಧಾನ ಸಭೆ ನಡೆಸಲಾಯಿತು. ಬೆಂಗಳೂರಿನ ಗಾಂಧಿನಗರದಲ್ಲಿರೋ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ಗಂಗರಾಜು ನೇತೃತ್ವದಲ್ಲಿ ಈ ಸಭೆ ನಡೆಯಿತು.. ರಮ್ಯಾ ತಾನು ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ನವೆಂಬರ್ 25 ರಂದು ಮತ್ತೊಂದು ಸಭೆ ಕರೆಯುವುದಾಗಿ ಗಂಗರಾಜು ಹೇಳಿದ್ದಾರೆ. ಈ ತಿಂಗಳು ಮತ್ತು ಮುಂದಿನ ತಿಂಗಳು ಚಿತ್ರೀಕರಣಕ್ಕೆ ರಮ್ಯಾ ಡೇಟ್ ಬೇಕೇ ಬೇಕು ಎಂದು ನಿರ್ಮಾಪಕರು ಈ ನಡುವೆ ಆಗ್ರಹಿಸಿದ್ದಾರೆ. ಆದರೆ ರಮ್ಯಾ ಆ ಡೇಟ್ನಲ್ಲಿ ಚಿತ್ರೀಕರಣಕ್ಕೆ ಒಪ್ಪುವುದು ಅಸಂಭವವೆಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಸಂಧಾನಸಭೆಯನ್ನು ನ.25ರಂದು ಆಯೋಜಿಸಲಾಗಿದೆ.