Select Your Language

Notifications

webdunia
webdunia
webdunia
webdunia

ಮಾಲಾಶ್ರಿ ಮಹಾಕಾಳಿ ಅವತಾರ ದಲ್ಲಿ ಶತ್ರು ನಾಶ ಮಾಡಿದರು .. ಎಲ್ಲಿ ಗೊತ್ತೇ?

ಮಾಲಾಶ್ರಿ ಮಹಾಕಾಳಿ ಅವತಾರ ದಲ್ಲಿ ಶತ್ರು ನಾಶ ಮಾಡಿದರು .. ಎಲ್ಲಿ ಗೊತ್ತೇ?
, ಶುಕ್ರವಾರ, 18 ಏಪ್ರಿಲ್ 2014 (10:43 IST)
PR
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸುತ್ತಿರುವ 'ಮಹಾಕಾಳಿ' ಚಿತ್ರದಲ್ಲಿ ಮಾಲಾಶ್ರೀ ಮುಖ್ಯ ಪಾತ್ರಧಾರಿ. ಮಾಲಾಶ್ರಿ ಚಿತ್ರ ಎಂದೊಡನೆ ಇದು ಆಕ್ಷನ್ ಭರಿತ ಚಿತ್ರ ಎನ್ನುವುದು ಎಲ್ಲರಿಗು ಗೊತ್ತು. ಈ ಮಹಾ ಕಾಳಿ ಸಹ ಆಕ್ಷನ್ ಭರಿತ ಚಿತ್ರವಾಗಿದೆ. ಇದರ ಕ್ಲೈಮಾಕ್ಸ್ ಚಿತ್ರೀಕರಣ ಇತ್ತೀಚೆಗೆ ವಿ.ಆರ್.ಎಲ್ ಮೋಟರ್ಸ್, ಕುರುಬರಹಳ್ಳಿ ಅಪಾರ್ಟ್ ಮೆಂಟ್ ಹಾಗೂ ಗವಿಪುರಂ ಗುಟ್ಟಹಳ್ಳಿಯಲ್ಲಿ ನಡೆಯಿತು.

ಮಾಲಾಶ್ರೀ, ಶ್ರೀನಿವಾಸಮೂರ್ತಿ, ಜೈಜಗದೀಶ್, ಮೈಕೋ ನಾಗರಾಜ್, ಭಜರಂಗಿ ಲೋಕಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು. ಚಿತ್ರಕ್ಕೆ ಪಳನಿರಾಜ್ ಸಾಹಸ ನಿರ್ದೇಶನವಿದೆ . 'ಮಹಾಕಾಳಿ' ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮುಂದಿನ ತಿಂಗಳು ಅಂದರೆ, ಮೇನಲ್ಲಿ ಆರಂಭವಾಗಲಿದೆ.

ಕಥೆ, ಚಿತ್ರಕಥೆ ಅಜಯ್ ಕುಮಾರ್ , ಎಸ್.ಮಹೇಂದರ್ ನಿರ್ದೇಶನ ಚಿತ್ರದ ಮುಖ್ಯ ಹೈಲೈಟ್ . ಸೆಲ್ವಂ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.ಭಾರಿ ಬಜೆಟ್ ಚಿತ್ರ ಇದಾಗಿದ್ದು, ಮಾಲಾಶ್ರೀ ಜೊತೆಯಲ್ಲಿ ಶ್ರೀನಿವಾಸಮೂರ್ತಿ, ಎಂ.ಎನ್.ಲಕ್ಷ್ಮೀದೇವಿ, ಪದ್ಮಿನಿಪ್ರಕಾಶ್, ಜೈಜಗದೀಶ್, ಮೈಕೋ ನಾಗರಾಜ್, ಭಜರಂಗಿ ಲೋಕಿ, ಮುಂತಾದವರು ನಟಿಸಿದ್ದಾರೆ.

Share this Story:

Follow Webdunia kannada