ಹಾಗೊಂದು ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಇದು ಅಮೂಲ್ಯರನ್ನು ಕಾಡುತ್ತಿರುವ ಪ್ರಶ್ನೆ ಕೂಡಾ ಎಂದರೆ ತಪ್ಪಾಗಲಾರದು. ಏಕೆಂದರೆ 'ಚೆಲುವಿನ ಚಿತ್ತಾರ' ಚಿತ್ರದ ಯಶಸ್ಸಿನ ನಂತರ ಆಕೆ ಅಂಥದ್ದೊಂದು ಚಿತ್ರವನ್ನು ನೀಡಿಯೇ ಇಲ್ಲ.
ಈ ಚಿತ್ರ ಬರುವುದಕ್ಕೂ ಮುಂಚೆ 'ಚಂದು', 'ಕಲ್ಲರಳಿ ಹೂವಾಗಿ', 'ತಿಮ್ಮ' ಇವೇ ಮೊದಲಾದ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಹದಿಹರೆಯದ ಪ್ರೇಮಕಥೆಯಾದ 'ಚೆಲುವಿನ ಚಿತ್ತಾರ'ಕ್ಕೆ ನಾಯಕಿಯನ್ನಾಗಿಸಿದವರು ಎಸ್.ನಾರಾಯಣ್. ಆ ಚಿತ್ರವೇನೋ ಯಶಸ್ವಿಯಾಯಿತು. ನಂತರ ತಮ್ಮ ಮಗ ಪಂಕಜ್ ನಾಯಕನಾಗಿದ್ದ ಚಿತ್ರಕ್ಕೂ ಅಮೂಲ್ಯಾರನ್ನೇ ನಾಯಕಿಯನ್ನಾಗಿ ನಾರಾಯಣ್ ಆರಿಸಿದರು. ಆದರೆ ಆ ಚಿತ್ರ ವಿಫಲಗೊಂಡಿತು.
ಆದರೆ ನಂತರ ಅವರಿಬ್ಬರ ಮಧ್ಯೆ ಅದೇನು ಮನಸ್ತಾಪ ಬಂದಿತೋ ಗೊತ್ತಿಲ್ಲ. ಪಂಕಜ್ನ ಮುಂದಿನ ಚಿತ್ರಕ್ಕೆ ರೂಪಿಕಾ ನಾಯಕಿಯಾಗಿ ಆಯ್ಕೆಯಾದರು. ಈ ನಡುವೆ ರತ್ನಜ ನಿರ್ದೇಶನದ 'ಪ್ರೇಮಿಸಂ' ಚಿತ್ರವು ತೆರೆಕಂಡಿತು. ಆ ಚಿತ್ರವೂ ಸಹ ವಿಫಲಗೊಂಡಿತು.
ಈಗ 'ಮನಸಾಲಜಿ' ಚಿತ್ರವನ್ನು ಅವರ ಅಣ್ಣ ದೀಪಕ್ ಅರಸ್ ನಿರ್ದೇಶಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಅನೂಪ್ ಸೀಳೀನ್ ಸಂಗೀತ, ಜೋನಿ ಹರ್ಷ ಸಂಕಲನವಿರುವ ಈ ಚಿತ್ರ ಗೆಲ್ಲಲೇಬೇಕಿರುವುದು ಅಮೂಲ್ಯಾಗಿರುವ ಅನಿವಾರ್ಯತೆಯಾಗಿದೆ. ಅದು ನೆರವೇರಲಿ ಎಂದು ಹರಸುವ.