Webdunia - Bharat's app for daily news and videos

Install App

ಭಾರತಿ ಅಪ್‌ಸೆಟ್, ಚಿತ್ರಕ್ಕೆ 'ವಿಷ್ಣುವರ್ಧನ' ಹೆಸರಿಡಲು ಬಿಡಲ್ಲ: ಬಸಂತ್

Webdunia
MOKSHA
ದ್ವಾರಕೀಶ್ ನಿರ್ಮಾಣ ಮಾಡಲೆಂದು ಹೊರಟ ವಿಷ್ಣುವರ್ಧನ ಚಿತ್ರಕ್ಕೆ ಸ್ವತಃ ಭಾರತೀ ವಿಷ್ಣುವರ್ಧನ್ ಅವರ ವಿರೋಧ ಬಂದಿರುವ ಜೊತೆಗೆ ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ, ಈ ಚಿತ್ರಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಆ ಮೂಲಕ ವಿಷ್ಣುವರ್ಧನ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್, ವಿಷ್ಣುವರ್ಧನ ಹೆಸರಿನಲ್ಲಿ ಚಿತ್ರ ಮಾಡುತ್ತೇವೆ. ಅನುಮತಿ ಕೊಡಿ ಎಂಬ ಅರ್ಜಿ ಬಂದಿದೆ. ಆದರೆ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಹೆಸರಾಂತ ವ್ಯಕ್ತಿಗಳು, ಗಣ್ಯರು ಹಾಗೂ ರಾಜಕೀಯ, ಸಂಘ ಸಂಸ್ಥೆಗಳ ಹೆಸರನ್ನು ಸಿನಿಮಾಕ್ಕೆ ಇಡಬಾರದು. ಹಾಗಾಗಿ ನಿಯಮಗಳ ಪ್ರಕಾರ ವಿಷ್ಣುವರ್ಧನ್ ಹೆಸರಿಡಲು ನಾವು ಬಿಡುವುದಿಲ್ಲ. ಜೊತೆಗೆ ಭಾರತಿ ವಿಷ್ಣುವರ್ಧನ್ ಕೂಡಾ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ನಾವು ದ್ವಾರಕೀಶ್ ಅವರಿಗೆ ಈ ಹೆಸರಿಡಲು ಬಿಡೋದಿಲ್ಲ. ನಮ್ಮ ನಿಯಮ ಮೀರಿ ಹೆಸರಿಟ್ಟರೆ ಅದು ಕಾನೂನು ರೀತಿಯ ಅಪರಾಧವಾಗುತ್ತದೆ ಎಂದಿದ್ದಾರೆ.

ಭಾರತಿ ಆಕ್ರೋ ಷ: ಇನ್ನೊಂದೆಡೆ ಭಾರತೀ ವಿಷ್ಣುವರ್ಧನ್ ಅವರು, ವಿಷ್ಣುವರ್ಧನ್ ಅವರು ನಮ್ಮನಗಲಿ ಇನ್ನೂ ಆರು ತಿಂಗಳೂ ಸಂದಿಲ್ಲ. ಇಡೀ ರಾಜ್ಯವೇ ಅವರು ಸತ್ತಾಗ ಶೋಕತಪ್ತವಾಗಿತ್ತು. ನಾವಿನ್ನೂ ಅವರ ಸಾವಿನ ಶಾಕ್‌ನಿಂದ ಹೊರಬಂದಿಲ್ಲ. ಆದರೆ ಇದೀಗ ನನ್ನ ಗಂಡನ ಹೆಸರನ್ನು ಬಳಸಿ ಚಿತ್ರ ಮಾಡಲು ಹೊರಟಿದ್ದಾರೆ. ಇದು ಒಳ್ಳೆಯದಲ್ಲ. ವ್ಯಾಪಾರದ ಉದ್ದೇಶದಿಂದ ನನ್ನ ಗಂಡನ ಹೆಸರನ್ನು ಸಿನಿಮಾಕ್ಕೆ ಯಾಕಿಡಬೇಕು ಹೇಳಿ ಅವರು? ಇದನ್ನು ನಾನು ಖಂಡಿಸುತ್ತೇನೆ. ಈ ಬೆಳವಣಿಗೆ ನನಗೆ ನೋವು ತಂದಿದೆ ಎಂದಿದ್ದಾರೆ.

ವಿಷ್ಣುವರ್ಧನ ಎಂದು ಚಿತ್ರಕ್ಕೆ ಹೆಸರಿಡುವ ಮುನ್ನ ನಮ್ಮನ್ನು ಅವರು ಕೇಳಿಲ್ಲ. ಯಾರ ಅನುಮತಿಯನ್ನೂ ಪಡೆದಿಲ್ಲ. ಚಿತ್ರವೊಂದಕ್ಕೆ ವಿಷ್ಣುವರ್ಧನರ ಹೆಸರಿಡುವ ಈ ಸುದ್ದಿ ಕೇಳಿ ಸಾವಿರಾರು ವಿಷ್ಣು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದರು ಭಾರತಿ.

ಹೆಸರು ಹೇಳಲಿಚ್ಛಿಸದ ಸಿನಿಮಾ ರಂಗದ ಗಣ್ಯರೊಬ್ಬರು ಹೇಳುವ ಪ್ರಕಾರ, ಹಲವಾರು ಬಾರಿ ದ್ವಾರಕೀಶ್ ಅವರು ವಿಷ್ಣುವರ್ಧನ್ ಅವರ ಕಾಲೆಳೆದಿದ್ದಾರೆ. ಹಲವಾರು ಬಾರಿ ನೇರವಾಗಿ ಮಾಧ್ಯಮಗಳ ಎದುರು ವಿಷ್ಣು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಪ್ತರಕ್ಷಕ ಶೂಟಿಂಗ್ ಸಂದರ್ಭ ವಿಷ್ಣು ಕುದುರೆಯಿಂದ ಬಿದ್ದು ಹಾಸಿಗೆಯಲ್ಲಿ ಮಲಗಿದ್ದಾಗಲೂ ಅವರ ವಿರುದ್ಧ ಮಾತಾಡಿದ್ದಾರೆ. ವಿಷ್ಣುವರ್ಧನ್ ಅವರು ತಾವು ಬಿದ್ದುದಕ್ಕೂ ನಾಗವಲ್ಲಿ ಕಾಟಕ್ಕೂ ಸಂಬಂಧ ಕಲ್ಪಿಸುವ ಮೂಲಕ ಪಬ್ಲಿಸಿಟಿ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ದ್ವಾರ್ಕಿ ದೂರಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments