Select Your Language

Notifications

webdunia
webdunia
webdunia
webdunia

ಭಗ್ನಪ್ರೇಮಿ ಮಂಜುನಾಥ್ ಹಿಂಸೆ: ವಿಂದ್ಯಾ ಪ್ರೀತಿಗೆ ಬಿತ್ತು ಕಡಿವಾಣ

ಭಗ್ನಪ್ರೇಮಿ ಮಂಜುನಾಥ್ ಹಿಂಸೆ: ವಿಂದ್ಯಾ ಪ್ರೀತಿಗೆ ಬಿತ್ತು ಕಡಿವಾಣ
, ಭಾನುವಾರ, 2 ಮಾರ್ಚ್ 2014 (15:57 IST)
PR
PR
ವಿಂದ್ಯಾ ಇತ್ತೀಚೆಗೆ ತಾನೆ ಕನ್ನಡ ಚಿತ್ರರಂಗದ ನಟಿಯಾಗಿ ಮಿಂಚಿದ್ದಾರೆ. ಒಂದು ವರ್ಷದಿಂದ ಪ್ರೀತಿ, ಪ್ರೇಮ ಅಂತ ಸುತ್ತಾಟ ಮಾಡಿದ ವಿಂದ್ಯಾ ನಟಿಯಾಗಿ ಸಿನೆಮಾದಲ್ಲಿ ಚಾನ್ಸ್ ಸಿಕ್ಕಿದ ನಂತರ ಮಂಜುನಾಥ್ ಎಂಬ ಯುವಕನ ಪ್ರೇಮವನ್ನು ತಿರಸ್ಕರಿಸಿದ್ದಾಳೆ ಎಂದು ಮಂಜುನಾಥ್ ಟಿವಿವಾಹಿನಿಯೊಂದಕ್ಕೆ ದೂರನ್ನು ಹೇಳಿಕೊಂಡಿದ್ದಾನೆ. ಅನೇಕ ವರ್ಷಗಳಿಂದ ವಿಂದ್ಯಾ ಮತ್ತು ಮಂಜುನಾಥ್ ಪ್ರೀತಿಸುತ್ತಿದ್ದರು. ಈಗ ವಿಂದ್ಯಾ ಮಂಜುನಾಥ್‌ನನ್ನು ತಿರಸ್ಕರಿಸಿದ್ದರಿಂದ ಅವನು ಭಗ್ನಪ್ರೇಮಿಯಾಗಿದ್ದಾನೆ. ವಿಂದ್ಯಾ 'ಮನದ ಮರೆಯಲ್ಲಿ' ಚಿತ್ರದ ನಾಯಕಿಯಾದ ಮೇಲೆ ತನಗೆ ಕೈಕೊಟ್ಟಿದ್ದಾಳೆ ಎಂದು ಮಂಜುನಾಥ್ ಆರೋಪಿಸಿದ್ದಾನೆ. ಮಂಜುನಾಥ್ ಅವಳನ್ನು ಎಷ್ಟೊಂದು ಪ್ರೀತಿಸುತ್ತಿದ್ದನೆಂದರೆ ರಕ್ತದಲ್ಲಿ ಪ್ರೇಮ ಪತ್ರ ಬರೆದು ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದ.

ಆದರೆ ವಿಂದ್ಯಾ ಚಿತ್ರನಟಿಯಾಗಿ ಮಿಂಚಿದ ಬಳಿಕ ಮಂಜುನಾಥ್ ಅವಳಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದಾನೆ ಎಂದು ವಿಂದ್ಯಾ ದೂರಿದ್ದಾಳೆ. ನೀನು ನನ್ನನ್ನು ಮದುವೆಯಾಗದಿದ್ದರೆ ಆಸಿಡ್ ಎರಚಿ ನಿನ್ನ ಮುಖವನ್ನೇ ವಿರೂಪ ಮಾಡ್ತೇನೆ ಎನ್ನುತ್ತಾನೆ ಮತ್ತು ಕೆಟ್ಟ ಕೆಟ್ಟದಾಗಿ ಮಾತನಾಡಿ ಮಾನಸಿಕ ಹಿಂಸೆ ನೀಡ್ತಾನೆ ಎಂದು ವಿಂದ್ಯಾ ದೂರಿದ್ದಾಳೆ. ವಿಂದ್ಯಾ ತಂದೆ, ತಾಯಿ ಇಬ್ಬರೂ ದೃಷ್ಟಿಹೀನರಾಗಿದ್ದು, ತಾಯಿ ಒಬ್ಬರೇ ಮನೆಯಲ್ಲಿದ್ದಾಗ ವಿಂದ್ಯಾ ಮನೆಗೆ ತೆರಳುವ ಮಂಜುನಾಥ ಬಾಗಿಲು ತೆಗೆಯುವಂತೆ ಒತ್ತಾಯಿಸುತ್ತಿದ್ದ. ಮಂಜುನಾಥನ ಹಿಂಸೆ ಸಹಿಸಲಾರದೇ ಅವನನ್ನು ತ್ಯಜಿಸುವ ನಿರ್ಧಾರಕ್ಕೆ ವಿಂದ್ಯಾ ಬಂದಿದ್ದಾಳೆ.

Share this Story:

Follow Webdunia kannada