ಬೆಂಗಳೂರು: ಬ್ರಹ್ಮ ಚಿತ್ರೀಕರಣದ ವೇಳೆ ಸಹಕಲಾವಿದನಿಗೆ ಗಾಯವಾದ ಘಟನೆ ನಡೆದಿದೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ, ಕಾರು ಪಲ್ಟಿ ಹೊಡೆಯಿತು. ಉಪೇಂದ್ರ ನಟನೆಯ ಬ್ರಹ್ಮ ಚಿತ್ರೀಕರಣದ ವೇಳೆ ಪಿಇಎಸ್ ಕಾಲೇಜು ನೈಸ್ ರಸ್ತೆಯಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಕಾರು ಪಲ್ಟಿ ಹೊಡೆಯಿತು. ಕಾರು ಇಳಿಜಾರಿನ ಹಲಗೆಯ ಮೇಲೆ ಹತ್ತಿ ಪುನಃ ರಸ್ತೆಯ ಮೇಲೆ ಜಂಪ್ ಮಾಡಿ ತೆರಳಬೇಕಿತ್ತು.
ಆದರೆ ಇಳಿಜಾರಿನ ಹಲಗೆಯ ಮೇಲೆ ಹತ್ತಿ ಕಾರು ಎರಡು ಮೂರು ಬಾರಿ ಪಲ್ಟಿ ಹೊಡೆದು ಉರುಳಿದ್ದರಿಂದ ಸಹಚಾಲಕನ ಕಾಲಿಗೆ ಪೆಟ್ಟಾಗಿದೆ. ಸಹಚಾಲಕ ಹೆಲ್ಮೆಟ್ ಹಾಕಿಕೊಂಡಿದ್ದರೂ ತಲೆಗೆ ಸ್ವಲ್ಪ ಕೂಡ ಸ್ವಲ್ಪ ಪೆಟ್ಟಾಗಿದೆ. ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.