Select Your Language

Notifications

webdunia
webdunia
webdunia
webdunia

ಬೃಂದಾವನ: ದರ್ಶನ್‌‌ ಮೂರು ಹಾಡಿನ ಚಿತ್ರೀಕರಣ ಬಾಕಿ

ಬೃಂದಾವನ: ದರ್ಶನ್‌‌ ಮೂರು ಹಾಡಿನ ಚಿತ್ರೀಕರಣ ಬಾಕಿ
ಬೆಂಗಳೂರು , ಶನಿವಾರ, 10 ಆಗಸ್ಟ್ 2013 (11:26 IST)
PR
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬೃಂದಾವನ ಚಿತ್ರದ ಮೂರು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆಯಂತೆ. ಬೃಂದಾವನ ಚಿತ್ರ ಆರಂಭದಿಂದಲೇ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಐಸ್ಲ್ಯಾಂಡ್ನಲ್ಲಿ ಚಿತ್ರೀಕರಣ ಮುಗಿಸಿ ಬರುತ್ತಲೇ ಕಾಲು ನೋವು ಮಾಡಿಕೊಂಡ ದರ್ಶನ್ ಮೈಸೂರಿನಲ್ಲಿ ಶೂಟಿಂಗ್ ವೇಳೆ ಕುದುರೆ ಮೇಲಿಂದ ಬಿದ್ದು ಕುತ್ತಿಗೆ ಉಳುಕಿಸಿಕೊಂಡರು. ವೈದ್ಯರು ಒಂದು ವಾರದ ವಿಶ್ರಾಂತಿಗೆ ಸಲಹೆ ನೀಡುವ ಮೂಲಕ ಈ ಸಮಸ್ಯೆ ಬಗೆಹರಿಯಿತು. ಬೃಂದಾವನ ಚಿತ್ರೀಕರಣದ ವೇಳೆಗೆ ದರ್ಶನ್ಗೆ ಫಿಲಂಫೇರ್ ಅವಾರ್ಡ್ ಬಂದಿದ್ದು ಸುದ್ದಿಯಾಯಿತು. ಚಿತ್ರೀಕರಣ ಭರದಿಂದ ನಡೆಯುತ್ತಿದ್ದ ಕಾರಣ ಅವರಿಗೆ ಪ್ರಶಸ್ತಿ ತೆಗೆದುಕೊಳ್ಳಲೂ ಹೋಗಲಾಗಲಿಲ್ಲ. ಈ ಬಗ್ಗೆ ದರ್ಶನ್ ಅವರೇ ಬೇಸರಿಸಿಕೊಂಡಿದ್ದು ಮತ್ತೊಂದು ಬಾರಿ ಸುದ್ದಿಯಾಯಿತು.

ಕೊನೆಗೂ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಹದಿನೈದು ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ದರ್ಶನ್ ಜೊತೆ ಕಾರ್ತೆಕಾ ನಾಯರ್, ಅಜಯ್, ಗೀತಾ, ಶರತ್ ಬಾಬು ಮೊದಲಾದವರು ಪಾಲ್ಗೊಂಡಿದ್ದು ಬೆಂಗಳೂರು ಹಾಗೂ ಮೈಸೂರಿನ ಸುತ್ತಮುತ್ತ ಶೂಟಿಂಗ್ ನಡೆಯಿತು. ಈಗ ಗುಣಮುಖರಾಗಿರುವ ದರ್ಶನ್ ಮತ್ತೆ ಉಳಿದ ಹಾಡಿನ ಭಾಗಕ್ಕೆ ತಯಾರು ನಡೆಸುತ್ತಿದ್ದಾರೆ. ಉಳಿದಿರುವ ಹಾಡಿನಲ್ಲಿ ಒಂದು ಸಕಲೇಶಪುರ ಸಮೀಪ ಚಿತ್ರೀಕರಣಗೊಂಡರೆ ಮತ್ತೆರಡು ಹಾಡಿಗೆ ವಿದೇಶಕ್ಕೆ ಹೋಗಲು ರೆಡಿಯಾಗುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತವಿದ್ದು ಕವಿರಾಜ್ ಮತ್ತು ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ತಾರಾಗಣದಲ್ಲಿ ಗೀತಾ, ಮಿಲನ, ಶರತ್ಬಾಬು, ಸಾಯಿಕುಮಾರ್, ಸಾಧುಕೋಕಿಲ ದೊಡ್ಡಣ್ಣ, ಕಿಲ್ಲರ್ ವೆಂಕಟೇಶ್ ಮೊದಲಾದವರಿದ್ದಾರೆ.

Share this Story:

Follow Webdunia kannada