ರಮ್ಯಾ ರಾಜಕೀಯಕ್ಕೆ ಸೇರಿರುವಂಥದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿತ್ರರಂಗದಲ್ಲಿ ಅಲೆ ಎಬ್ಬಿಸಿರುವ ರಮ್ಯಾ ರಾಜಕೀಯದಲ್ಲೂ ಬಿರುಸಿನ ಚಟುವಟಿಕೆಗೆ ಮುಂದಾಗಿದ್ದಾರೆ.
ಬೆಂಗಳೂರಿನ ಶಾಂತಿನಗರದಿಂದ ಯುವ ಕಾಂಗ್ರೆಸ್ ಬೂತ್ ಮಟ್ಟದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಅವರು ತಮ್ಮ ಜವಾಬ್ದಾರಿಯನ್ನು ಜಾಗರೂಕತೆಯಿಂದ ನಿರ್ವಹಿಸುತ್ತಿದ್ದಾರೆ.
ಸಿದ್ಲಿಂಗು ಸೇರಿದಂತೆ 3,4 ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ ತಮ್ಮ ಜವಾಬ್ದಾರಿ ನಿರ್ವಹಿಸುವುದಲ್ಲಿ ರಾಜಿ ಇಲ್ಲ ಎನ್ನುತ್ತಿದ್ದಾರೆ.
ಇದು ವಾಸ್ತವ....(ಮುಂದಿನ ಪುಟದಲ್ಲಿ)
ಕೃಪ ೆ: ಸನ್ ಟಿವಿ ರಮ್ಯಾ ರಸ್ತೆಗಿಳಿದರೆ ಕೆಲಸ ಚುರುಕಾಗುವುದರಲ್ಲಿ ಎರಡು ಮಾತಿಲ್ಲ. ಕಸ ಹಾಕಬೇಡಿಪಾ ಎಂದರೆ ಯಾರೂ ಕಸ ಹಾಕಲ್ಲ. ನಮ್ಮ ಸುತ್ತ ಮುತ್ತಲೂ ನಿರ್ಮಲವಾದ ಪ್ರದೇಶ ರೂಪಿಸಲು ಸಹಕರಿಸಿ ಎಂದು ನಗುಮುಖದಲ್ಲಿ ಹೇಳಿದರೆ ಪ್ರಾಯಶಃ ಎಲ್ಲರೂ ಹೌದೌದು ನೀವೇಳಿದ್ದು ನಿಜ ಎಂಬುದಂತೂ ಸತ್ಯ.
ಏನಾದರೂ ಆಗಲಿ ಇಂತಹಾ ಲೆಕ್ಕಾಚಾರ ಹಾಕಿಕೊಂಡೇ ನಟಿ ರಮ್ಯಾರನ್ನು ಕಣಕ್ಕಿಳಿಸಿದ ಡಿ.ಕೆ.ಶಿವಕುಮಾರ್ ಅವರ ಪೊಲಿಟಿಕಲ್ ಮಾರ್ಕೆಟಿಂಗ್ ಬುದ್ದಿವಂತಿಕೆಗೆ ಭೇಷ್ ಎನ್ನುತ್ತಿದೆ ಗಾಂಧಿನಗರ.