Select Your Language

Notifications

webdunia
webdunia
webdunia
webdunia

ಪ್ರೀತಿಸಿದ ಯುವತಿಯ ಕೈಬಿಟ್ಟು ಓಡಿಹೋದನಾ ಗಣೇಶ್ ತಮ್ಮ?

ಪ್ರೀತಿಸಿದ ಯುವತಿಯ ಕೈಬಿಟ್ಟು ಓಡಿಹೋದನಾ ಗಣೇಶ್ ತಮ್ಮ?
, ಬುಧವಾರ, 29 ಫೆಬ್ರವರಿ 2012 (17:31 IST)
PR
ಮುಂಗಾರು ಮಳೆ, ಗಾಳಿಪಟ, ಚೆಲುವಿನ ಚಿತ್ತಾರದಂತಹಾ ಹೃದಯ ಕಲಕುವಂತಹಾ ಪ್ರೇಮಕತೆಗಳಲ್ಲಿ ನಾಯಕನಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರ ತಮ್ಮ ಮಹೇಶ್, ಇದೀಗ ತಾನು ಪ್ರೀತಿಸಿದ ಯುವತಿಯೊಂದಿಗೆ ಮದುವೆಯಾಗುವ ವಿಚಾರದಿಂದ ಬೇಸತ್ತು ಮನೆಬಿಟ್ಟು ಓಡಿ ಹೋಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಸಂಬಂಧ ಬೆಂಗಳೂರಿನ ನೆಲಮಂಗಳ ಪ್ರದೇಶದ ವ್ಯಾಪ್ತಿಗೊಳಪಡುವ ಠಾಣೆಯೊಂದರಲ್ಲಿ ಪರಾರಿ ಮಾಹಿತಿ ನೀಡಲಾಗಿದ್ದು ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ.

ಮಹೇಶ್ ಮತ್ತು ಪ್ರಿಯತಮೆ ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಮಾರ್ಚ್ 2ರಂದು ಮದುವೆ ನಿಶ್ಚಯವಾಗಿತ್ತು. ಮದುವೆ ಸಮೀಪಿಸುತ್ತಿದ್ದಂತೆ ಗಣೇಶ್ ತಮ್ಮ ಮಹೇಶ್ ಅವರಿಗೆ ಮದುವೆ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಆದರೆ ಮೂರು ದಿನಗಳಿಂದ ಮಹೇಶ್, ಶಿಲ್ಪಾ ಗಣೇಶ್, ಗಣೇಶ್ ಹಾಗೂ ಅವರ ತಂದೆ ತಾಯಿ ಯಾರೂ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಯುವತಿಯ ಕುಟುಂಬಸ್ಥರು ಪರಾರಿ ಭೀತಿಗೊಳಗಾಗಿದ್ದು ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಮಾಹಿತಿ ನೀಡಿದ್ದಾರೆ.




Share this Story:

Follow Webdunia kannada