Webdunia - Bharat's app for daily news and videos

Install App

ಪತ್ನಿ ನಾಗರತ್ನ ಬೇಡ, ಮಕ್ಕಳು ಬೇಕೆಂದ ದುನಿಯಾ ವಿಜಯ್

Webdunia
PR
ದುನಿಯಾ ವಿಜಯ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪತ್ನಿ ನಾಗರತ್ನ ಮತ್ತು ಅವರ ಕುಟುಂಬದ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದರು. ತನ್ನ ವಿರುದ್ಧ ಪತ್ನಿ ಕಡೆಯವರು ಮಾಡಿದ್ದ ಆರೋಪಗಳಿಗೆ ಸಿನಿಮೀಯ ರೀತಿಯಲ್ಲೇ ಉತ್ತರಿಸಿದರು. ಅವುಗಳ ಸಂಕ್ಷಿಪ್ತ ನೋಟ ಇಲ್ಲಿದೆ. ಓದಿಕೊಳ್ಳಿ.

ಪತ್ನಿ ಬೇಡವೇ ಬೇಡ:
ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ. 14 ವರ್ಷಗಳ ವನವಾಸ ಸಾಕಾಗಿದೆ. ಇನ್ನಾದರೂ ಮುಕ್ತಿ ಸಿಗಲಿ. ನೀವು ಚೆನ್ನಾಗಿರಿ ಎಂದ ವಿಜಯ್, ನೇರವಾಗಿ ಪತ್ನಿ ಬೇಡ ಎಂದು ಎಲ್ಲೂ ಹೇಳಲಿಲ್ಲ. ಆದರೆ ಪ್ರತಿ ಮಾತು ಮಾತಿಗೂ ಈ ಸಂಬಂಧ ಬೇಡವೇ ಬೇಡ ಎಂಬಂತೆ ಮಾತನಾಡಿದರು. ನಾಗರತ್ನ ಮಾಡಿದ ಬಹುತೇಕ ಆರೋಪಗಳಿಗೆ ಉತ್ತರಿಸುತ್ತಾ ಹೋದ ಅವರು, ತನಗೆ ಯಾವುದೇ ಅಕ್ರಮ ಸಂಬಂಧಗಳಿಲ್ಲ ಎಂದರು. ಶುಭಾ ಪೂಂಜಾ ಜತೆಗಿನ ಮದುವೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ವಿಜಿ ಬಹುವಚನ:
ವಿಜಿ ತಾನು ಸಿದ್ಧಪಡಿಸಿದ್ದ ಸಿಡಿ ಮತ್ತು ಸುದ್ದಿಗೋಷ್ಠಿಯುದ್ದಕ್ಕೂ ಪತ್ನಿ ನಾಗರತ್ನರನ್ನು ಬಹುವಚನದಿಂದಲೇ ಸಂಬೋಧಿಸಿದರು. ಶ್ರೀಮತಿ ನಾಗರತ್ನ ಅವರೇ ಎಂದು ಪ್ರತಿ ಮಾತಿಗೂ ಹೇಳುತ್ತಿದ್ದರು. ವಿಜಿ ಹೆತ್ತವರು ಮತ್ತು ಸಂಬಂಧಿಕರು ಕೂಡ ನಾಗರತ್ನ ಅವರೇ ಎಂದು ಅತಿಯಾದ ಗೌರವ ತೋರಿಸುವ ಮೂಲಕ ನಾಟಕೀಯತೆ ಮೆರೆದರು.

ಮಕ್ಕಳು ಬೇಕು:
ನಾನು ಮಕ್ಕಳಿಗೆ ಯಾವುದೇ ತೊಂದರೆ ಮಾಡಿಲ್ಲ. ಮಕ್ಕಳನ್ನು ಟಿವಿ ಸ್ಟುಡಿಯೋದಲ್ಲಿ ಕೂರಿಸಿ, ಅವುಗಳ ಬಾಯಲ್ಲಿ ಸುಳ್ಳು ಹೇಳಿಸಬಾರದಿತ್ತು. ಕೆಲವೇ ದಿನಗಳ ಹಿಂದಷ್ಟೇ ಅದೇ ಮಕ್ಕಳನ್ನು ನಾನು ಶಾಪಿಂಗ್‌ಗೆ ಕರೆದುಕೊಂಡು ಹೋಗಿದ್ದೆ. ಅದಕ್ಕೆ ಇಲ್ಲಿದೆ ನೋಡಿ ದಾಖಲೆ ಎಂದು ವಿಡಿಯೋ ಪ್ರದರ್ಶಿಸಿದ ವಿಜಯ್, ನನ್ನ ಮಕ್ಕಳನ್ನು ಜೀವಂತ ಇರುವವರೆಗೆ ಬಿಟ್ಟು ಕೊಡಲಾರೆ ಎಂದು ತನ್ನ ಮಾತನ್ನು ಪುನರುಚ್ಛರಿಸಿದರು.

ಎಲ್ಲ ಕೊಟ್ಟಿದ್ದೇನೆ:
ನಾಗರತ್ನ ನಾಟಕ ಮಾಡುತ್ತಿದ್ದಾರೆ. ನಾನು ಆಕೆಯನ್ನು ನಿಕೃಷ್ಟವಾಗಿ ನೋಡಿಕೊಂಡಿದ್ದೇನೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಈಗ ಸಂದರ್ಶನಗಳಿಗೆ ಹಾಜರಾಗುವಾಗ ಅವರು ಬಣ್ಣ ಮಾಸಿದ, ಚೆನ್ನಾಗಿಲ್ಲದ ಸೀರೆಗಳನ್ನು ಉಡುತ್ತಿದ್ದಾರೆ. ಚಿನ್ನಾಭರಣಗಳನ್ನೂ ಹಾಕಿಕೊಳ್ಳುತ್ತಿಲ್ಲ. ಆದರೆ ವಾಸ್ತವ ಬೇರೆಯೇ ಇದೆ. ನಾನು ಲಕ್ಷಾಂತರ ಮೌಲ್ಯದ ಆಭರಣಗಳು, ಸೀರೆ ಕೊಡಿಸಿದ್ದೇನೆ. ಅದಕ್ಕೆ ಇಲ್ಲಿದೆ ಸಾಕ್ಷಿ ಎಂದು ನಾಗರತ್ನ ಚಿನ್ನಾಭರಣ ಭೂಷಿತೆಯಾಗಿರುವ ಫೋಟೋಗಳನ್ನು ಪ್ರದರ್ಶಿಸಿದರು. ಪತ್ನಿ-ಮಕ್ಕಳಿಗೆ ಖರೀದಿಸಿರುವ ಚಿನ್ನ, ಬಟ್ಟೆ ಬಿಲ್, ವಿಮಾನ ಯಾನದ ಟಿಕೆಟ್‌ಗಳನ್ನು ತೋರಿಸಿದರು.

ಹೆತ್ತವರು ಬೇಕು:
ನನಗೆ ಹೆತ್ತವರೇ ದೇವರು. ಇವರೇ ಭಗವದ್ಗೀತೆ, ಇವರೇ ಬೈಬಲ್, ಇವರೇ ಕುರಾನ್. ಇವರನ್ನು ಬಿಟ್ಟು ನಾನಿರಲಾರೆ ಎಂದ ವಿಜಯ್, ತನ್ನ ಅಕ್ಕನ ಮಕ್ಕಳ ಅಭಿಪ್ರಾಯಗಳನ್ನೂ ಸಂಗ್ರಹಿಸಿ ಅದನ್ನೂ ಮಾಧ್ಯಮಗಳಿಗೆ ಸಿಡಿ ರೂಪದಲ್ಲಿ ನೀಡಿದರು. ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ನಾಗರತ್ನ ಕುಟುಂಬ ಸರಿಯಿಲ್ಲ:
ನಾನು ನಾಗರತ್ನ ಅವರ ಸಹೋದರನನ್ನು ಅಪಹರಿಸಿಲ್ಲ. ಆತ ಯಾವುದೋ ಹುಡುಗಿಗೆ ಮೋಸ ಮಾಡಲು ಹೋಗಿದ್ದ. ಆಕೆಯ ಜತೆ ಮದುವೆ ಮಾಡಿಸಲು ಯತ್ನಿಸಿದ್ದೆ. ಆದರೆ ಒಳ್ಳೆಯದು ಮಾಡಲು ಹೋದ ನನಗೆ ತೊಂದರೆ ಮಾಡಲಾಯಿತು. ನನ್ನ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇದು ನನಗೆ ತುಂಬಾ ನೋವಾಗಿದೆ.

ನಾಗರತ್ನ ಅವರ ತಂದೆ, ತಾಯಿಗೆ, ಅವರ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದ್ದೇನೆ. ಅವರಿಗೆ ಆರೋಗ್ಯ ಸಮಸ್ಯೆಗಳಿದ್ದಾಗ ರಕ್ತ ಕೂಡ ಕೊಟ್ಟಿದ್ದೇನೆ. ಒಡವೆ ನೀಡಿದ್ದೇನೆ. ನನ್ನ ಹೆತ್ತವರಂತೆ ನೋಡಿಕೊಂಡಿದ್ದೇನೆ. ಆದರೂ ಆರೋಪ ಮಾಡಲಾಗಿದೆ. ಇದನ್ನು ದೇವರು ಮೆಚ್ಚಲಾರ ಎಂದು ವಿಜಿ ಗದ್ಗದಿತರಾದರು.

ಮಾಧ್ಯಮಗಳ ಸಹವಾಸ ಬೇಡ:
ವಿಜಿ-ನಾಗರತ್ನ ವಿವಾಹ ವಿಚ್ಛೇದನ ವಿಚಾರ ಬಯಲಾಗುತ್ತಿದ್ದಂತೆ ಪೈಪೋಟಿಗೆ ಬಿದ್ದಿದ್ದ ಟಿವಿ ಚಾನೆಲ್‌ಗಳು, ಇಬ್ಬರನ್ನೂ ಮಾತನಾಡಿಸಲು ಮುಗಿ ಬಿದ್ದಿದ್ದವು. ಅದರಲ್ಲೂ ಕನ್ನಡದ ಎರಡು ಚಾನೆಲ್‌ಗಳಂತೂ ಒಬ್ಬೊಬ್ಬರನ್ನು ಸ್ಟುಡಿಯೋದಲ್ಲಿ ಕೂರಿಸಿಕೊಂಡು ವಾದ-ವಿವಾದ ಆಲಿಸಿ ತೀರ್ಪು ಕೊಡುವಂತೆ ವರ್ತಿಸಿದ್ದವು. ಇವುಗಳಿಂದ ರೋಸಿ ಹೋಗಿರುವ ವಿಜಯ್, ಇನ್ನೆಂದೂ ಈ ವಿಚಾರದಲ್ಲಿ ಟಿವಿ ಸ್ಟುಡಿಯೊಗಳಿಗೆ ಬರಲಾರೆ ಎಂದರು.

ಆರೋಪ ಸುಳ್ಳೆಂದ ವಿಜಿ ಪತ್ನಿ:
ಪತಿ ವಿಜಯ್ ಮಾಡಿರುವ ಆರೋಪಗಳಲ್ಲಿ ಎಳ್ಳಷ್ಟೂ ಸತ್ಯವಿಲ್ಲ ಎಂದು ಪತ್ನಿ ನಾಗರತ್ನ ತಿರುಗೇಟು ನೀಡಿದ್ದಾರೆ.

ವಿಜಿ ಮತ್ತು ಅವರ ಕುಟುಂಬದವರು ಸೇರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ನನಗೆ ಮಾನಸಿಕ ಕಿರುಕುಳ ನೀಡಿದರೆ ವಿಚ್ಛೇದನ ನೀಡಬಹುದು ಎನ್ನುವುದು ಅವರ ಲೆಕ್ಕಾಚಾರ. ಆದರೆ ನಾನು ನನ್ನ ಪತಿಗೆ ವಿಚ್ಛೇದನ ನೀಡಲಾರೆ. ಹಾಗೆ ಮಾಡಿದರೆ ಇನ್ನೊಂದು ಹುಡುಗಿಯ ಜೀವನ ಹಾಳಾಗುತ್ತದೆ ಎಂಬ ಅರಿವು ನನಗಿದೆ. ನನಗೆ ವಿಚ್ಛೇದನ ಕೊಟ್ಟ ನಂತರ ಅವರು ಯಾರನ್ನು ಮದುವೆಯಾಗುತ್ತಾರೆ ಎನ್ನುವುದು ನನಗೆ ಗೊತ್ತು ಎಂದು ನಾಗರತ್ನ ತಿಳಿಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?