Webdunia - Bharat's app for daily news and videos

Install App

ನೀರ್ ದೋಸೆ: ರಮ್ಯಾರನ್ನು ಓಡಿಸಿದ ಹೆಜ್ಜೇನುಗಳು, ಭಾವನಾ ಔಟ್!

Webdunia
PR
' ನೀರ್ ದೋಸೆ' ಚಿತ್ರತಂಡವನ್ನು ಸೋಮವಾರ ಬೆಳಗ್ಗೆ ಜೇನ್ನೊಣಗಳು ಅಟ್ಟಾಡಿಸಿಕೊಂಡು ಕಚ್ಚಿವೆ. ಆದರೆ ಅಪಾಯದಿಂದ ನಾಯಕಿ ಲಕ್ಕಿ ಸ್ಟಾರ್ ರಮ್ಯಾ ಪಾರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ರಾಜರಾಜೇಶ್ವರಿನಗರದ ಬೆಸ್ಟ್ ಕ್ಲಬ್‌ನಲ್ಲಿ ಸೋಮವಾರ ಚಿತ್ರೀಕರಣ ನಡೆಯುತ್ತಿತ್ತು. ರಮ್ಯಾ ಮತ್ತು ದತ್ತಣ್ಣ ಸೆಟ್‌ನಲ್ಲಿರುವ ಸಂದರ್ಭ ಇದ್ದಕ್ಕಿದ್ದಂತೆ ಜೇನ್ನೊಣಗಳು ದಾಳಿ ಮಾಡಿದ್ದವು. ಅಪಾಯ ಅರಿತು ಎಚ್ಚೆತ್ತುಕೊಂಡ ರಮ್ಯಾ ತಕ್ಷಣವೇ ಶೂಟಿಂಗ್ ವಾಹನದೊಳಕ್ಕೆ ಹೋಗಿ ತಪ್ಪಿಸಿಕೊಂಡರು. ಆದರೆ ರಮ್ಯಾ ಸಹಾಯಕರು ಸೇರಿದಂತೆ ಸೆಟ್‌ನಲ್ಲಿದ್ದ ಇತರರಿಗೆ ಜೇನ್ನೊಣಗಳು ಕಚ್ಚಿದವು.

ಈ ಸಂದರ್ಭ ಕೆಲವರು ಈಜುಕೊಳಕ್ಕೆ ಹಾರಿ ತಪ್ಪಿಸಿಕೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಚಿತ್ರೀಕರಣ ಜಾಗ ಬದಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು 'ನೀರ್ ದೋಸೆ' ಚಿತ್ರದಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಭಾವನಾ ಹೊರ ನಡೆದಿದ್ದಾರೆ. ಚಿತ್ರದಲ್ಲಿ ನಟಿಸುತ್ತಿಲ್ಲ ಎಂದುಹೇಳಿಕೊಂಡಿದ್ದಾರೆ! ಭಾವನಾ ಇಲ್ಲಿ ಕಿರಿಕ್ ಮಾಡಿ ಹೊರ ಹೋಗುತ್ತಿಲ್ಲ. ಒಪ್ಪಿಕೊಂಡಿರುವ ಭರತನಾಟ್ಯ ಪ್ರದರ್ಶನಗಳ ಕಾರಣ ಚಿತ್ರೀಕರಣದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 'ನೀರ್ ದೋಸೆ' ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

' ಸಿದ್ಲಿಂಗು' ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ 'ನೀರ್ ದೋಸೆ'ಯಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಭಾವನಾ ಮತ್ತು ದತ್ತಣ್ಣ ಇನ್ನೆರಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಈಗ ಭಾವನಾ ಕಳಚಿಕೊಂಡಿದ್ದಾರೆ.

ಭಾವನಾ ತನ್ನ ಭರತನಾಟ್ಯದ ಕಾರಣ ನೀಡಿದ್ದರೂ, ಬೇರೆ ಏನಾದರೂ ಕಿರಿಕ್ ಆಗಿರುವ ಬಗ್ಗೆಯೂ ಶಂಕೆಗಳಿವೆ. ರಮ್ಯಾ ಮತ್ತು ಭಾವನಾ ಇಬ್ಬರ ನಡುವಿನ ಸಂಬಂಧವೂ ಇಲ್ಲಿ ಪಾತ್ರವಹಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕರು ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಭಾವನಾ ಜಾಗಕ್ಕೆ ಬೇರೆ ನಟಿಯನ್ನು ಆಯ್ಕೆ ಮಾಡಲು ಹೊರಟಿದ್ದಾರೆ.

' ನೀರ್ ದೋಸೆ' ಚಿತ್ರದಲ್ಲಿ ಜಗ್ಗೇಶ್ ಅವರದ್ದು ಶವ ಸಾಗಾಟದ ವ್ಯಾನ್ ಚಾಲಕನ ಪಾತ್ರ. ರಮ್ಯಾ ಕ್ಲಬ್ ಡ್ಯಾನ್ಸರ್ ಆಗಿ ಹಾಗೂ ದತ್ತಣ್ಣ ಲೋಕೋಪಯೋಗಿ ಇಲಾಖೆಯ ನಿವೃತ್ತ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments