Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ವಿರುದ್ಧ ನಿರ್ಮಾಪಕ ಆರ್. ಎಸ್. ಗೌಡ ದೂರು

ದುನಿಯಾ ವಿಜಯ್ ವಿರುದ್ಧ ನಿರ್ಮಾಪಕ ಆರ್. ಎಸ್. ಗೌಡ ದೂರು
, ಶುಕ್ರವಾರ, 15 ನವೆಂಬರ್ 2013 (14:27 IST)
PR
PR
ಬೆಂಗಳೂರು: ಸಿಂಹಾದ್ರಿ ಚಿತ್ರದ ನಿರ್ಮಾಪಕ ಆರ್.ಎಸ್.ಗೌಡ ನಟ ದುನಿಯಾ ವಿಜಯ್ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಡಿ.9ಕ್ಕೆ ಸಿಂಹಾದ್ರಿ ಚಿತ್ರದ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆದರೆ ವಿಜಯ್ ಅವರ 'ಕೋಬ್ರಾ' ಚಿತ್ರಕ್ಕೆ ಕೂಡ ಡಿ.9ಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಕೋಬ್ರಾ ಚಿತ್ರಕ್ಕೆ ವಿಜಯ್ ಕಮಿಟ್ ಆಗಿರುವ ಬಗ್ಗೆ ತಮಗೆ ತಿಳಿಸಿರಲಿಲ್ಲ. ಸಿಂಹಾದ್ರಿ ಚಿತ್ರದ ಆರಂಭಕ್ಕೂ ಮೊದಲೇ ಸಂಪೂರ್ಣ ಸಂಭಾವನೆಯನ್ನು ವಿಜಯ್ ಪಡೆದುಕೊಂಡಿದ್ದಾರೆ. ಆದರೆ ಕೋಬ್ರಾ ಚಿತ್ರಕ್ಕೆ ಡೇಟ್ ಕೊಟ್ಟಿದ್ದಾರೆ ಮತ್ತು ಒಂದೇ ದಿನದಲ್ಲಿ ಎರಡು ಚಿತ್ರಗಳಿಗೆ ಮುಹೂರ್ತ ಮಾಡುತ್ತಿದ್ದಾರೆ.

ಇದರಿಂದ ನನ್ನ ಚಿತ್ರದ ಚಿತ್ರೀಕರಣಕ್ಕೆ ತೊಂದರೆಯಾಗುತ್ತದೆ ಎಂದು ಆರ್.ಎಸ್. ಗೌಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada